77ನೆಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಂಗನವಾಡಿ ವಿದ್ಯಾರ್ಥಿಗಳಿಗೆ ಚೇರು ವಿಚಾರಣೆ!!!!!
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು 34ನೆಯ ಹಿರೇಜಂತಕಲ್ ಮೂರನೇ ಕೇಂದ್ರ ಅಂಗನವಾಡಿ ಶಾಲೆಗೆ ಸ್ವಾತಂತ್ರ ದಿನಾಚರಣೆ ಅಂಗವಾಗಿ 16 ಚೇರುಗಳನ್ನು ಶ್ರೀಮತಿ ಶ್ರೀದೇವಿ ಗಂಡ ಶರಣಬಸವ ಕುಟುಂಬದಿಂದ ಚೇರ್ ವಿತರಣೆ ಮಾಡಲಾಯಿತು ಈ ಒಂದು ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀದೇವಿ ಅವರು ತಮ್ಮ ವೈಯಕ್ತಿಯಿಂದ ಈ ಒಂದು ಅಂಗನವಾಡಿ ಶಾಲೆಗೆ ನಮ್ಮ ಮಗು ಕೂಡ ಈ ಶಾಲೆಯಲ್ಲಿ ಓದುತ್ತಿರುವುದರಿಂದ ಈ ಶಾಲೆಗೆ ಬರುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಜೊತೆಗೆ ಇಲ್ಲಿಯ ಶಿಕ್ಷಕಿ ಸುನೀತಾ ಅವರು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಪಡೆಯುತ್ತಾರೆ ಎಂದು ನಮಗೆ ನಂಬಿಕೆ ಇದೆ ಮತ್ತು ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಕುರ್ಚಿ ಹಾಗೂ ಆಟ ಆಡಿಸಲು ಚೇರ್ ಅವಶ್ಯಕತೆ ಇದೆ ಎಂದು ನಮ್ಮ ಗಮನಕ್ಕೆ ಬಂದಿದ್ದು ಈ ಶಾಲೆಯಲ್ಲಿ ಓದುವ ಮಕ್ಕಳಿಗೆ ಅನುಕೂಲವಾಗಲೆಂದು ನಮ್ಮ ಕೈಯಲ್ಲಿ ಎಷ್ಟು ಸಾಧ್ಯ ಅಷ್ಟು ಸಹಾಯ ಮತ್ತು ಸಹಕಾರ ಇರುತ್ತದೆಯೆಂದು ಹೇಳಿದರು. ಇದೇ ಸಂದರ್ಭದಲ್ಲಿ ವಿಶ್ವನಾಥ್ ಅವರ ಪೋಷಕರಾದ ಶ್ರೀಮತಿ ಶ್ರೀದೇವಿಮಾತನಾಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಾದ ಸುನಿತಾ ನೀಲಮ್ಮ ಕಲಾವತಿ ಶರಣಮ್ಮ ರೇಣುಕಾ ಹಾಗೂ ಅಂಗನವಾಡಿ ಸಹಾಯಕಿರಾದ ಮಂಜಮ್ಮ ಸೇರಿದಂತೆ ಇತರರು ಇದ್ದರು…

ವರದಿ ಹೆಚ್. ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
