ಕಬಡ್ಡಿಯಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಸಿಂಧನೂರು.ಸ.21.ತಾಲೂಕಿನ ಸರ್ಕಾರಿಪ್ರೌಢಶಾಲೆ ಸಾಲಗುಂದಾದಲ್ಲಿ ಸೆಪ್ಟಂಬರ್ 20 ರಂದು ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶ್ರೀಪುರಂ ಜಂಕ್ಷನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿದ್ದು ಹೂಗಾರ, ಉಪಾಧ್ಯಕ್ಷ ಪದ್ಮ ಅಂಬಿರಾಜ, ಸರ್ವ ಸದಸ್ಯರು ಮುಖ್ಯ ಗುರುಗಳು ಸೀತಾ, ಶಿಕ್ಷಕರುಗಳಾದ ಮೋಹನ, ತೀರ್ಥನಗೌಡ, ಮೇರಿ ಬೆಟಗೇರಿ, ಲಕ್ಷ್ಮೀ ದೇವಿ, ರತ್ನಮ್ಮ, ರೂಪ ದೀಪ ಪಂಚಾಯತ್ ಸದಸ್ಯ ಅಂಬಣ್ಣ ಜೋಗಿ ಸೇರಿದಂತೆ ಕಬ್ಬಡಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
