ತಾಲ್ಲೂಕಾ ಹೋರಾಟ ಮುಂದು ವರೆಯುದು .
ಬಾಗಲಕೋಟ ಜಿಲ್ಲೆಯ ಬೆಲ್ಲದ ನಾಡು ವಾಣಿಜ್ಯ ನಗರಿ ಎಂದೆ ಕರೆಯಲ್ಪಡುವ ಮಹಾಲಿಂಗಪುರ ಪಟ್ಟಣವನ್ನು ತಾಲ್ಲೂಕಾ ಎಂದು ಘೋಷಣೆ ಮಾಡಬೇಕೆಂದು 157 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದ್ದು ಮೊನ್ನೆ ಅಷ್ಟೇ ಮುಖ್ಯಮಂತ್ರಿ ಹತ್ರ ನಿಯೋಗ ಒಯ್ದ ಸಮಿತಿ ಇಂದು ಹತ್ತಾರು ಹಳ್ಳಿಯ ಸಾರ್ವಜನಿಕ ಸಭೆ ಕರೆದು ಮುಖ್ಯ ಮಂತ್ರಿಗಳ ಭರವಸೆ ಬಗ್ಗೆ ಮನವರಿಕೆ ಮಾಡಿದರು ಆಡಳಿತ ಪಕ್ಷದ ಮುಖಂಡರಿಗೆ ಮತ್ತು ವಿರೋಧ ಪಕ್ಷದ ಮುಖಂಡರ ಗಮನಕ್ಕೆ ತಂದು ಅವರಿಗೆ ನಗರದ ಸಂಪೂರ್ಣ ಮಾಹಿತಿ ನೀಡಿ ಬಂದಿರುವುದಾಗಿ ತಿಳಿಸಿದರು ಆದರೆ ತಾಲ್ಲೂಕಾ ಆಗುವ ವರೆಗೂ ಹೋರಾಟ ನಿಲ್ಲದು ಇದು ನಿರಂತರ ನಡೆಯಬೇಕಾಗಿದೆ ಅದಕ್ಕಾ ಎಲ್ಲಾ ಗ್ರಾಮದ ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಗಪ್ಪ ಹಳ್ಳಿ.ಧರೇಪ್ಪ ಸಾಂಗ್ಲಿಕರ.ಗಂಗಾಧರ ಮೇಟಿ.ಅರ್ಜುನ ಹಲಗಿಗೌಡರ.ಮಹಾಲಿಂಗಪ್ಪಬ ಸನದಿ.ಚನ್ನಬಸು ಹುರಕಡ್ಲಿ ಇನ್ನೂ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ.
ಶಿವಶಂಕರ ಕಡಬಲ್ಲವರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
