ಇಟ್ಟಿಗಿಯಲ್ಲಿ ಅದ್ದೂರಿ ದೇವ ಶಿಲ್ಪಿ ವಿಶ್ವಕರ್ಮ ಮಹೋತ್ಸವ ಮೆರವಣಿಗೆ.
ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ದೇವಶಿಲ್ಪಿ ಶ್ರೀ ವಿಶ್ವಕರ್ಮ ಮಹೋತ್ಸವದ ಅಂಗವಾಗಿ ದಿನಾಂಕ 18/09/2022ರಂದು ಅದ್ಧೂರಿ ಮೆರವಣಿಗೆ ನಡೆಯಿತು. ಸುಮಾರು 90 ಅಧಿಕ ವಿಶ್ವಕರ್ಮ (ವಿಶ್ವಬ್ರಾಹ್ಮಣ)ರ ಕುಟುಂಬಗಳನ್ನು ಒಳಗೊಂಡ ಇಟ್ಟಿಗಿ(ಹೋಬಳಿ)ಯಲ್ಲಿ ಸಮಾಜದ ಎಲ್ಲಾ ಬಾಂಧವರು ಒಗ್ಗಾಟ್ಟಾಗಿ ಶ್ರೀ ಭಗವಾನ್ ವಿಶ್ವಕರ್ಮ ಮಹೋತ್ಸವ ಆಚರಣೆ ಮಾಡಲಾಯಿತು.

ಬೆಳಿಗ್ಗೆ ಶ್ರೀ ಕಾಳಿಕಾ ದೇವಿಗೆ ಅಭಿಷೇಕ ವಿಶೇಷ ಅಲಂಕಾರ ಮಾಡಿ .ಶ್ರೀ ಯುತ GB ವೀರಭದ್ರ ಚಾರ್ ಅವರು ತಯಾರಿಸಿದ ಅತಿ ಸುಂದರ ದೇವ ಶಿಲ್ಪಿ ಶ್ರೀ ವಿಶ್ವಕರ್ಮ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು ಕಳಸದೊಂದಿಗೆ ಸಮಾಳ ವಾದ್ಯಗಳೊಂದಿಗೆ ಗೊಂಬೆಗಳ ಕುಣಿತ ವಿಶೇಷ ಆಕರ್ಷಿಣಿಯವಾಗಿತ್ತು. ಈ ಕಾರ್ಯಕ್ರಮದಲ್ಲಿ ಊರಿನ ಭಕ್ತರೆಲ್ಲರಲೂ ಭಾಗವಹಿಸಿ ಯಶಸ್ವಿಯಾಗಿ ನೇರವೆರಿಸಿದರು.ಈ ಕಾರ್ಯಕ್ರಮದಲ್ಲಿ ಸಮಸ್ತ ವಿಶ್ವಕರ್ಮ ಕರ್ಮ ಕುಲ ಬಾಂಧವರು ಭಾಗವಹಿಸಿದ್ದರು.
ವರದಿ -ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
