ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ – ನ್ಯಾ.ಕಾಂಬಳೆ…!!!

ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ – ನ್ಯಾ.ಕಾಂಬಳೆ

ಸಿಂಧನೂರ. ಅ 31 .ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ ಹಾಗಾಗಿ ಪ್ರತಿದಿನ ವ್ಯಾಯಾಮ ಮಾಡಿ ಅನಗತ್ಯ ವಿಷಯಗಳ ಬಗ್ಗೆ ವಿನಾಕಾರಣ ತಲೆ ಕೆಡಿಸಿಕೊಂಡು ನಿಮ್ಮ ಆರೋಗ್ಯ ವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೋಟೆಪ್ಪ ಕಾಂಬಳೆ ತಿಳಿಸಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ತಾಲೂಕು ನ್ಯಾಯವಾದಿಗಳ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾನಸಿಕ ಒತ್ತಡ ಕಡಿಮೆ ಮಾಡುವ ಕುರಿತು ವ್ಯಾಪಕ ಜಾಗೃತಿಯ ಅವಶ್ಯಕತೆ ಇರುವವರಿಗೆ ತಲುಪಿಸಬೇಕು. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿಮ್ಮಗಳಿಂದ ಆಗಬೇಕು ಎಂದು ಮಾತನಾಡಿದರು.
ಹಿಂದೆ ಪೌಷ್ಟಿಕ ಆಹಾರ ಸೇವನೆಯಿಂದ ಮನಷ್ಯನ ಆರೋಗ್ಯ ಸದೃಢವಾಗಿ ಯಾವುದೆ ರೋಗ ರುಜಿನಗಳು ಬಾರದಂತೆ ದೂರ ಇರುತ್ತಿದ್ದವು. ಬದಲಾದ ಪರಿಸ್ಥಿತಿಯಲ್ಲಿ ವಿಷ ಮಿಶ್ರಿತ ಆಹಾರ ಸೇವನೆ ಯಿಂದ ಆರೋಗ್ಯ ಹದಗೇಡಿಸಿ ಕೊಂಡು ಹಲವಾರು ಕಾಯಿಲೆಗಳಿಂದ ನರಳಿ ಮರಣ ಹೊಂದುವ ಕಾಲ ಬಂದಿದೆ. ಹಣ್ಣು ತರಾಕಾರಿಗಳು ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರ ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಲಹೆ ಪಡೆಯಬೇಕು.ಅವಶ್ಯಕತೆ ಬಿದ್ದರೆ ನ್ಯಾಯಾಲಯದ ಮೊರೆ ಬಂದರೆ ನಾವೂ ಅವರಿಗೆ ಸಲಹೆ ನೀಡುತ್ತೇವೆ ಎಂದು ಅವರು ಹೇಳಿದರು.
ಉಪನ್ಯಾಸಕರಾಗಿ ಡಾ.ಅಯ್ಯನಗೌಡ ಅವರು ಮಾತನಾಡಿ ಮನಸಿಗೆ ಜಾಸ್ತಿ ಒತ್ತು ಕೊಡಬೇಕು. ಮಾನಸಿಕವಾಗಿ ಮನುಷ್ಯ ಸಧೃಡರಾಗಲು ಪ್ರಾಣಾಯಾಮ ಬಹಳ ಮುಖ್ಯ.ಕೆಲವು ಬಾರಿ ಯಾವುದೋ ಘಟನೆಯಿಂದ ಅಥವಾ ಕೆಲಸದ ಒತ್ತಡದಿಂದ ಆಘಾತಕ್ಕೆ ಒಳಗಾಗಿ ಮೆದುಳಿನಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆಯಿಂದ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಅಲ್ಲದೆ ಅವರ ವರ್ತನೆಯಲ್ಲಿ ಬದಲಾವಣೆಯಾಗುತ್ತದೆ ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವುದರ ಜೊತೆಗೆ ಧೈರ್ಯ ನೀಡಬೇಕು. ಪ್ರಪಂಚದಾದ್ಯಂತ ಮಾನಸಿಕ ರೋಗದಿಂದ ತುತ್ತಾದವರ ಸಂಖ್ಯೆ 792 ಮಿಲಿಯನ್ ಜನರು ಇದ್ದಾರೆ. ಶೇ 10% ರಷ್ಟು ಜನಸಂಖ್ಯೆ ಸಾಮಾನ್ಯ ಮಾನಸಿಕ ಕಾಯಿಲೆ,ಶೇ 1ರಷ್ಟು ಜನಸಂಖ್ಯೆ ತೀವ್ರತರ ಮಾನಸಿಕ ಕಾಯಿಲೆಯಿಂದ ಎಲ್ಲಾ ವಯಸ್ಕಿನ ಜನರು ಮಾನಸಿಕವಾಗಿ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಒಂದನೆಯ ಅಪರ ಸಿವಿಲ್ ನ್ಯಾಯಾಧೀಶರಾದ ಆನಂದಪ್ಪ ಎಂ ದೊಡ್ಡಮನಿ, ಎರಡನೇಯ ಅಪರ ಸಿವಿಲ್ ನ್ಯಾಯಾಧೀಶರಾದ ಆಚಪ್ಪ ದೊಡ್ಡ ಬಸವರಾಜ, ವಕೀಲ ಸಂಘದ ಅಧ್ಯಕ್ಷರಾದ ಬೀಮನಗೌಡ,ಖಜಾಂಚಿ ವೀರಭದ್ರ ಗೌಡ, ಡಾ.ಗಂಗಾಧರ, ಡಾ.ಸುರೇಶ ಗೌಡ, ಸಹಾಯಕ ಅಭಿಯೋಜಕರಾದ ಹನುಮೇಶ ನಾಯಕ,ರಾಜಕುಮಾರ ಸೇರಿದಂತೆ ಇತರರು ವೇದಿಕೆಯ ಮೇಲೆ ಇದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend