ಹರಪನಹಳ್ಳಿ ಪಟ್ಟಣದ ಬೀಡಿ ಕಾರ್ಮಿಕರೊಂದಿಗೆ ಎಂ.ಪಿ ಲತಾ ಮಲ್ಲಿಕಾರ್ಜುನ್ ಸಂವಾದ
ಹರಪನಹಳ್ಳಿ ಪಟ್ಟಣದ ಬಾಣಗೇರಿ ನಿವಾಸಿ ಬೀಡಿ ಕಾರ್ಮಿಕರೊಂದಿಗೆ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂಪಿ ಲತಾ ಮಲ್ಲಿಕಾರ್ಜುನ್ ಸಂವಾದ ನಡೆಸಿದರು.
ನಾನು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ಇಲ್ಲಿಗೆ ನಿಮ್ಮ ಸಂಕಷ್ಟಗಳನ್ನು ತಿಳಿಯಲು ಬಂದಿದ್ದೇನೆ ನಮ್ಮ ಸರ್ಕಾರ ಈಗ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಇಲ್ಲ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಬಡವರ ಕಷ್ಟಗಳನ್ನು ಆಲಿಸುವ ವ್ಯವಧಾನ ಇಲ್ಲ.
ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದoತಹ ಸಂದರ್ಭದಲ್ಲಿ ನಿಮ್ಮ ಪರವಾಗಿ ಚಿಂತನೆ ಮಾಡಿ 10 ಕೆಜಿ ಅಕ್ಕಿಯನ್ನು ಪುಕ್ಕಟೆಯಾಗಿ ತಮಗೆ ಕೊಟ್ಟಿರುವಂತದ್ದು, 40 ವರ್ಷ ಮೇಲ್ಪಟ್ಟ ಮದುವೆಯಾಗದೆ ಇರುವ ಹೆಣ್ಣುಮಕ್ಕಳಿಗೆ ಮಾಸಾಶನ ಕೊಡುವಂತಹ ಕಾರ್ಯಕ್ರಮ.
ಹೀಗೆ ಹತ್ತು ಹಲವಾರು ಮಹಿಳೆಯರ ಬಡವರ ಅಭಿವೃದ್ಧಿಗೆ ಪೂರಕವಾದಂಥ ಕಾರ್ಯಕ್ರಮಗಳನ್ನು ರೂಪಿಸಿರುವಂಥದ್ದು ಸಿದ್ದರಾಮಯ್ಯನವರ ಸರ್ಕಾರ.
ಡಾ. ಮನಮೋಹನ್ ಸಿಂಗ್ ರವರು ಅಧಿಕಾರದಲ್ಲಿದ್ದ0ತ ಸಂದರ್ಭದಲ್ಲಿ ಕೇವಲ 400 ರೂಪಾಯಿಗೆ ಒಂದು ಸಿಲಿಂಡರ್ ಕೇವಲ 60 ರೂಪಾಯಿಗಳಿಗೆ ಪೆಟ್ರೋಲ್ 50 ರೂಪಾಯಿಗಳಿಗೆ ಡೀಸೆಲ್ ಸಿಗುವಂತದ್ದನ್ನ ನಾವು ನೋಡಿದ್ದೇವೆ. ಅದು ಬಡವರ ಪರವಾದದಂತ ಸರ್ಕಾರವಾಗಿತ್ತು. ಆದರೆ ಇವತ್ತು ಮೋದಿ ಸರ್ಕಾರ ಕಾರ್ಪೊರೇಟ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
