🇱🇹ಇಂದು ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ(ಕೋಗಳಿತಾಂಡ)ದ ವತಿಯಿಂದ ಮಾಲ್ವಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀ ಕೊಟ್ರೇಶ್ ರವರಿಗೆ ಧ್ವಜ-ಸ್ಥಂಭದ ಕಟ್ಟೆ ನಿರ್ಮಿಸಲು ಶೀಘ್ರದಲ್ಲಿ ಜಾಗ ಗೊತ್ತು ಮಾಡಿ ಇಲ್ಲದಿದ್ದರೆ ನವೆಂಬರ್ 1 ರಂದು ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಕೆ ನೀಡುವ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಕಾರ್ಯಾಧ್ಯಕ್ಷರಾದ ಶ್ರೀ ದೇವರಮನಿ ನೀಲಪ್ಪ, ತಾಲ್ಲೂಕು ಉಪಾಧ್ಯಕ್ಷರಾದ ಶ್ರೀ ಚಲವಾದಿ ಪ್ರಕಾಶ್,ಗ್ರಾಮ ಘಟಕ ಅಧ್ಯಕ್ಷರಾದ ಶ್ರೀ ಆರ್.ಪ್ರಕಾಶ್,ಗ್ರಾಮ ಘಟಕ ನಿಕಟ ಪೂರ್ವ ಕಾರ್ಯಾಧ್ಯಕ್ಷರಾದ ಶ್ರೀ ಎಲ್.ಸಂತೋಷ್ ನಾಯ್ಕ,ಸಂಚಾಲಕರಾದ ಶ್ರೀ ಬಿ.ಮಂಜುನಾಥ,ಕಾರ್ಯದರ್ಶಿಯಾದ ಆರ್.ಕೃಷ್ಣನಾಯ್ಕ,ಸದಸ್ಯರಾದ ಕೆ.ನಾಗರಾಜ್ ನಾಯ್ಕ ಕರವಸುಲಿಗಾರರಾದ ರತ್ನನಾಯ್ಕ,ಪಂಚಾಯಿತಿ ಸಿಬ್ಬಂದಿಗಳು ಹಾಗೂ ಇತರರಿದ್ದರು….

ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
