ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ಹಿರೇಕುಂಬಳಗುಂಟೆ ಗ್ರಾಮದ, ಬಸ್ ನಿಲ್ದಾಣದಿಂದ ಊರಿನ ಒಳಗೆ ಹೋಗುವ ಸಾರ್ವಜನಿಕರ ದಾರಿಯಲ್ಲಿ ಗ್ರಾಮದ ಚರಂಡಿಯ ಕೊಳಚೆ ನೀರು ಹರಿಯುತ್ತಿದ್ದು ಕ್ರಿಮಿ ಕೀಟಗಳು ಸೊಳ್ಳೆಗಳುಉತ್ಪತ್ತಿಯಾಗಿರುತ್ತಿವೆ. ಇಲ್ಲಿ ವಾಸಿಸುವ ಕುಟುಂಬಗಳು,ದೇವಸ್ಥಾನಗಳು ಇದ್ದು ಇಲ್ಲಿ ಹರಿಯುವ ಚರಂಡಿ ನೀರನ್ನು ಬೇರೆ ಕಡೆಗೆ ಹರಿದುಹೋಗುವಂತೆ ಚರಂಡಿ ನಿರ್ಮಾಣ ಮಾಡಿ ಇಲ್ಲಿ ವಾಸಿಸುವ ಕುಟುಂಬಗಳಿಗೂ ಸಾರ್ವಜನಿಕರಿಗೂ ಮಲೇರಿಯಾ ಡೆಂಗ್ಯೂ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯದಿಂದ ವಾಸಿಸಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಯಾವುದಾದರೂ ಯೋಜನೆಯಡಿಯಲ್ಲಿ ಈ ಕಾಮಗಾರಿಯನ್ನು ಹಾಕಿಕೊಂಡು ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಗ್ರಾಮ ದ, ವಿಜಯಕುಮಾರ್.ಬಸವನಗೌಡ ಸತೀಶ್ ಗೌಡ ರಮೇಶ್ ಸೇರಿದಂತೆ ಊರಿನ ಗ್ರಾಮಸ್ಥರು ಮನವಿ ಮಾಡಿರುತ್ತಾರೆ…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
