ಕೆ.ಆರ್.ಪೇಟೆ ತಾಲೋಕಿನ ಸೋಮನಹಳ್ಳಿ ಗ್ರಾಮದಲ್ಲಿ ಕನಕ ಜಯಂತಿ
ಹಾಗೂ ಕನ್ನಡ ರಾಜೋತ್ಸವ ಆಚರಣೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಸಂಘ ಸೋಮನಹಳ್ಳಿ, ಪುರ, ಸಂಗಾಪುರ, ಗುಡುಗನಹಳ್ಳಿ ಇವರ ವತಿಇಂದ ಅದ್ದೂರಿ ಕನಕ ಜಯಂತಿ ಹಾಗೂ ಕನ್ನಡ ರಾಜೋತ್ಸವ ಆಚರಿಸಲಾಯಿತು. ದಾಸ ಶ್ರೇಷ್ಠ ಕನಕದಾಸರು, ಕನ್ನಡಾಂಬೆ, ಸಂಗೊಳ್ಳಿರಾಯಣ್ಣ, ಅಕ್ಕ ಬುಕ್ಕ, ಕಾಗಿನೆಲೆ ಗುರುಗಳಾದ ನಿರಂಜನಾನಂದ ಪುರಿ ಮಹಾ ಸ್ವಾಮಿಗಳಿಗೆ ಪೂಜೆ ಸಲ್ಲಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ನಂತರ ಅನ್ನ ಸಂತರ್ಪಣೆ ಕಾರ್ಯ ಮಾಡಲಾಹಿತು . ಸೋಮನಹಳ್ಳಿ, ಪುರ, ಸಂಗಾಪುರ, ಮಾರ್ಗೋಡನಹಳ್ಳಿ, ಐಪನಹಳ್ಳಿ, ಆಲಂಬಾಡಿ ಕಾವಲ್, ಗುಡುಗನಹಳ್ಳಿ ಗ್ರಾಮಗಳಿಗೆ ದಾಸ ಶ್ರೇಷ್ಠ ಕನಕದಾಸರು, ಕನ್ನಡಾಂಬೆ, ಸಂಗೊಳ್ಳಿರಾಯಣ್ಣ, ಅಕ್ಕ ಬುಕ್ಕ, ಕಾಗಿನೆಲೆ ಗುರುಗಳಾದ ನಿರಂಜನಾನಂದ ಪುರಿ ಮಹಾ ಸ್ವಾಮಿಗಳ ಭಾವಚಿತ್ರದ ವಾಹನದೊಂದಿಗೆ ಬೈಕ್ ರ್ಯಾಲಿ ಮುಖಾಂತರ ತೆರಳಿ ಎಲ್ಲಾ ಗ್ರಾಮಗಳಲ್ಲಿ ಅನ್ನ ಸಂತರ್ಪಣೆ ಮಾಡಲಾಹಿತು. ಕಾರ್ಯಮಕ್ಕೆ ಕೈ ಜೋಡಿಸಿದ ಹಾಗೂ ಕಾರ್ಯಕ್ರಮದಲ್ಲಿ ಬಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವಕರ ಸಂಘ ಸೋಮನಹಳ್ಳಿ ಅವರ ಕಡೆಯಿಂದ ಧನ್ಯವಾದ ತಿಳಿಸಲಾಯಿತು…

ವರದಿ. ಎಂ. ಕೆ. ಮೂರ್ತಿ. ಚಿಕ್ಕಬಳ್ಳಾಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
