ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲ್ಲೂಕು ಕಾನಹೊಸಹಳ್ಳಿ.
ಕಾನಹೊಸಹಳ್ಳಿಗ್ರಾಮಕ್ಕೆ
ಅಸಿಸ್ಟೆಂಟ್ ಕಮಿಷನರ್ ಸಿದ್ದರಾಮೇಶ್ವರ ಅವರು ಭೇಟಿ
ಕಾನಹೊಸಹಳ್ಳಿ ದಲಿತ ಕಾಲೋನಿಯ ಸರ್ವಿಸ್ ರೋಡ್ ಪಕ್ಕದಲ್ಲಿರುವ ಚರಂಡಿ ಕಾಮಗಾರಿ, ಹಾಗೂ ಪಕ್ಕದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳ ಸಮಸ್ಯೆಯನ್ನು ಪರಿಶೀಲನೆ ಮಾಡಿದರು. ತಾಲೂಕು ಆಡಳಿತ, ಜಿಲ್ಲಾ ಆಡಳಿತ, ಮತ್ತು ಗ್ರಾಮ ಪಂಚಾಯತಿಯವರು ಈ ಕಾಮಗಾರಿಯನ್ನು ಪರಿಶೀಲಿಸಿ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಇಲ್ಲಿ ವಾಸಮಾಡುವ ಕುಟುಂಬದವರು ಮಾನ್ಯ ಅಸಿಸ್ಟೆಂಟ್ ಕಮಿಷನರ್ ಸಿದ್ದರಾಮೇಶ್ವರ ರವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಜರಿದ್ದರು. ಮಾನ್ಯ ಅಸಿಸ್ಟೆಂಟ್ ಕಮಿಷನರ್ ಸಿದ್ದರಾಮೇಶ್ವರ ರವರು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟವರಿಗೆ ಮಾತನಾಡಿ ಈ ಚರಂಡಿ ವ್ಯವಸ್ಥೆಯಿಂದ ಇಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಆಗುವ ತೊಂದರೆಯನ್ನು ಆದಷ್ಟು ಬೇಗ ಅತಿ ಶೀಘ್ರದಲ್ಲಿ ಈ ಕಾಮಗಾರಿಯನ್ನು ಪ್ರಾರಂಭ ಮಾಡಿ ಉತ್ತಮ ಗುಣಮಟ್ಟದಲ್ಲಿ ಕಳಪೆ ಯಾಗದಂತೆಚರಂಡಿಯನ್ನು ನಿರ್ಮಿಸಬೇಕು.ರಸ್ತೆ ಯಲ್ಲಿ ಹರಿಯುವ ಮಳೆಯ ನೀರು ಚರಂಡಿಯಲ್ಲಿ ಹೋಗುವಂತೆ ವ್ಯವಸ್ಥೆ ಮಾಡಿ. ಯಾವುದೇ ಕಾರಣಕ್ಕೆ ಇಲ್ಲಿ ಓಡಾಡುವ ಸಾರ್ವಜನಿಕರಿಗೂ ಹಾಗೂ ಇಲ್ಲಿ ವಾಸಿಸುವ ಕುಟುಂಬಗಳಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ನಿರ್ಮಿಸಿ ಎಂದು ಅಸಿಸ್ಟೆಂಟ್ ಕಮಿಷನರ್ ರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿಮಾನ್ಯ ತಹಸಿಲ್ದಾರ್ ಟಿ ಜಗದೀಶ್. ಕೊಟ್ಟೂರು ಸಿಪಿಐ ಸೋಮಶೇಖರ್ ಕೆಂಚರೆಡ್ಡಿ. ಸಿದ್ದರಾಮೇಶ್ವರ, ಕಂದಾಯ ಇಲಾಖೆಯ ಅಧಿಕಾರಿ ಮುರುಳಿರಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರು ನೀಲಮ್ಮ ಬೊಮ್ಮಯ್ಯ, ಸದಸ್ಯರಾದ ಹೊನ್ನೂರು ಸ್ವಾಮಿ. ರಾಷ್ಟ್ರೀಯ ಹೆದ್ದಾರಿ ಕಂಪನಿಯವರು, ಪೊಲೀಸ್ ಇಲಾಖೆ ಸಿಬ್ಬಂದಿ, ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
