ವಿಜಯನಗರ ಜಿಲ್ಲೆಯ ಒಂಬುಡ್ಸ್ ಮನ್ ಆಗಿ ಎಂ ಶಂಶುದ್ದೀನ್ ನೇಮಕ
ವಿಜಯ ನಗರ ಜಿಲ್ಲೆಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವಂತಹ ಒಂಬುಡ್ಸ್ ಮನ್ ಹುದ್ದೆಗೆ ಎಂ ಶಂಶುದ್ದಿನ್ ನಿವೃತ್ತ ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ .ಇವರು ನೇಮಕವಾಗಿದ್ದಾರೆ .ಎಂ ಶಂಶುದ್ದಿನ್ ಇವರು ಕಳೆದ ಮೂವತ್ತಾರು ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿ ಉಪನ್ಯಾಸಕರಾಗಿ , ಪ್ರಾಚಾರ್ಯರಾಗಿ, ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಇವರಲ್ಲಿದ್ದು ಇವರು ವಿಜಯನಗರ ಜಿಲ್ಲೆಯ ಪ್ರಥಮ ಓಂಬುಡ್ಸ್ ಮನ್ ಆಗಿ ಆಯ್ಕೆಯಾಗಿದ್ದಾರೆ .ಒಂಬುಡ್ಸ್ ಮನ್ ಆಗಿ ಆಯ್ಕೆಯಾಗಿದ್ದಕ್ಕೆ ಇವರ ಸ್ನೇಹಿತರ ಬಳಗ ಹಾಗೂ ವರ್ತೂರ್ ಪ್ರಕಾಶ್ ಅಭಿಮಾನಿ ಬಳಗ ಇವರನ್ನು ಸನ್ಮಾನಿಸಲಾಯಿತು .ಈ ಸಂದರ್ಭದಲ್ಲಿ ಎಚ್ಚರಿಕೆ ಜಿಲ್ಲಾ ವರದಿಗಾರರು ಮಂಜುನಾಥ ದೊಡ್ಡಮನಿ, ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಮಸ್ತಾನ್ , ಹನುಮಂತ ಹೊಸಪೇಟೆ ,ಗಣೇಶ್ ಉಕ್ಕಿನ ಕೋಟೆ ಜಿಲ್ಲಾ ವರದಿಗಾರರು, ರಾಮಾಲೇಪ್ಪ ಹೊಸಪೇಟೆ ,ಪರಶುರಾಮ್ ಗುತ್ತಿಗೆದಾರರು ,ವರ್ತೂರು ಪ್ರಕಾಶ್ ಅವರ ಅಭಿಮಾನಿ ಬಳಗ ಎಲ್ಲರೂ ಉಪಸ್ಥಿತರಿದ್ದರು..

ವರದಿ.ಗಣೇಶ್, ಕೆ. ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
