ಸಮರ್ಪಕವಾಗಿ ಮಾಸಾಶನ ನೀಡಿ, ವಿಮುಕ್ತ ದೇವದಾಸಿಯರ ಆಗ್ರಹ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ವಿಮುಕ್ತ ದೇವದಾಸಿ ಮಹಿಳೆಯರು,ತಮಗೆ ಸಮರ್ಪಕವಾಗಿ ಮಾಸಾಶನ ಮಂಜೂರು ಮಾಡುವಂತೆ ಹಾಗೂ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಅವರು ಎಐಟಿಯುಸಿ ನೇತೃತ್ವದಲ್ಲಿ ಫೆ23ರಂದು ಕಾರ್ಮಿಕ ಮುಖಂಡ ಹೆಚ್.ವೀರಣ್ಣನವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು,ನಂತರ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು.ಉಪತಹಶಿಲ್ದಾರರಾದ ಅರುಂಧತಿ ನಾಗವಿರವರಿಗೆ ಮುಖಂಡರಾದ ಗಜಾಪುರ ರೇಣುಕಮ್ಮ ನೇತೃತ್ವದಲ್ಲಿ,ತಾಲೂಕಿನ ವಿಮುಕ್ತ ದೇವದಾಸಿ ಮಹಿಳೆಯರು ಹಕ್ಕೊತ್ತಾಯ ಪತ್ರ ನೀಡಿದರು. ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆಗಳಿಂದ ಬಂದಿದ್ದ,ವಿಮುಕ್ತ ದೇವದಾಸಿ ಮಹಿಳೆಯರು ಉಪಸ್ಥಿತರಿದ್ದರು.

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
