ಚಿನ್ನ ಗಿರಿವಿ ಇಟ್ಟ ಗ್ರಾಹಕರನ್ನೇ ಟಾರ್ಗೇಟ್ ಮಾಡಿ ಟೋಪಿ ಹಾಕುತ್ತಿದ್ದವನ ವಿರುದ್ಧ ಎಫ್ಐಆರ್ ದಾಖಲು..!
ಬೆಂಗಳೂರು : ಚಿನ್ನ ಗಿರಿವಿ ಇಟ್ಟ ಗ್ರಾಹಕರನ್ನೇ ಟಾರ್ಗೆಟ್ ಮಾಡಿ, ಮಕ್ಮಲ್ ಟೋಪಿ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಚಿನ್ನ ಅಡವಿಟ್ಟು ಬಿಡಿಸಲಾರದೆ ಪರದಾಡುತ್ತಿರುವ ಜನರನ್ನೇ ಇವರು ಟಾರ್ಗೆಟ್ ಮಾಡುತ್ತಿದ್ದರು, ತೇಜಸ್ ಗೌಡ ಅಲಿಯಾಸ್ ಮೂರ್ತಿ ಎಂಬಾತನ ಮೇಲೆ ಆರೋಪ ಬಂದಿದ್ದು, ಈತ ರಾಘವೇಂದ್ರ ಜ್ಯುವಲರಿ ಶಾಪ್ ಮಾಲೀಕನಾಗಿದ್ದು, ಕಳೆದ ಒಂದು ವರ್ಷದ ಹಿಂದೆ ಜನರು ಇಲ್ಲಿ ಚಿನ್ನ ಗಿರವಿ ಇಟ್ಟಿದ್ದರು,
ಇವರು ಒಂದು ತಂಡವಾಗಿ ಯಾರ್ ಯಾರು ಎಲ್ಲೆಲ್ಲಿ, ಚಿನ್ನಾಭರಣ ಗಿರವಿ ಇಟ್ಟಿದ್ದಾರೆ ಎಂದು ಮಾಹಿತಿ ತೆಗೆದು ಕೊಳ್ಳುತ್ತಿದ್ದ ತೇಜಸ್ ಗೌಡ, ನಂತರ ಅವರನ್ನ ಸಂಪರ್ಕ ಮಾಡಿ ಕಡಿಮೆ ಬಡ್ಡಿ ಹಾಗೂ ಹೆಚ್ಚು ಹಣದ ಆಸೆ ತೋರಿಸುತ್ತಿದ್ದ. ಎಲ್ಲಿ ಚಿನ್ನಾಭರಣ ಅಡವಿಟ್ಟಿದ್ದರೋ ಅಲ್ಲಿಗೆ ಬಂದು ಬಿಡಿಸಿಕೊಳ್ಳುತಿದ್ದ, ನಂತರ 0.50 ಪೈಸೆ ಬಡ್ಡಿ ಅಂತ ಹೇಳಿ ಅವನದ್ದೇ ರಾಘವೇಂದ್ರ ಜ್ಯೂಲರಿ ಶಾಪ್ನಲ್ಲಿ ಗಿರವಿ ಇಟ್ಟುಕೊಳುತಿದ್ದ, ಕಳೆದ 3 ತಿಂಗಳಿಂದ ಜುವೆಲ್ಲರಿ ಶಾಪ್ ಕ್ಲೋಸ್ ಮಾಡಿದ್ದಾನೆ.
ಚಿನ್ನ ಅಡವಿಟ್ಟ ಜನರು ಚಿನ್ನ ಬಿಡಿಸಲು ಹೋದರೆ ಚಿನ್ನದ ಅಂಗಡಿ ಕ್ಲೋಸ್ ಆಗಿದೆ, ಫೋನ್ ಮಾಡಿ ಕೇಳಿದರೆ ಚಿನ್ನಾಭರಣ ಕೊಡ್ತೀನಿ ಅಂತ ಹೇಳ್ತಿದ್ದ ತೇಜಸ್, ಆದರೆ ಮರಳಿ ಚಿನ್ನ ಬಿಡಿಸಲು ಹೋದ್ರೆ ಸಂಪರ್ಕಕ್ಕೆ ಸಿಗದೆ ಕಳ್ಳಾಟ ಆಡುತ್ತಿದ್ದ, ಇದರಿಂದ ಬೇಸತ್ತಿರುವ ಚಿನ್ನ ಅಡವಿಟ್ಟ ಜನರು, ಜ್ಯುವೆಲ್ಲರಿ ಶಾಪ್ ಕ್ಲೋಸ್ ಬಳಿಕ ಫೈನಾನ್ಸ್ ಕಂಪನಿ ಓಪನ್ ಮಾಡಿದ್ದ ತೇಜಸ್ ಗೌಡ, ಸದ್ಯ ಫೈನಾನ್ಸ್ ಕಂಪನಿಯು ಒಂದು ವಾರದಿಂದ ಕ್ಲೋಸ್ ಆಗಿದೆ.
ಯಲಹಂಕ ಅಳ್ಳಾಳಸಂದ್ರ ನಿವಾಸಿ ಸೌಮ್ಯಲತಾ ಎಂಬಾಕೆಗೆ ₹50 ಲಕ್ಷಕ್ಕೂ ಅಧಿಕ ವಂಚನೆ ಮಾಡಿದ್ದಾನೆ. ವಿವಿಧ ಖಾಸಗಿ ಪೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟಿದ್ದ ಚಿನ್ನಾಭರಣವನ್ನು ಇದೇ ತೇಜಸ್ ಬಿಡಿಸಿದ್ದ, ಬಳಿಕ ತನ್ನ ರಾಘವೇಂದ್ರ ಜುವೆಲ್ಲರಿ ಶಾಪ್ ನಲ್ಲಿ ಅಡಮಾನ ಇರಿಸಿಕೊಂಡು ವಂಚನೆ ಮಾಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ.
ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಸೌಮ್ಯಲತಾ ಎಂಬುವವರು ದೂರು ನೀಡಿದ್ದು, ದೂರಿನ ಹಿನ್ನಲೆ ತೇಜಸ್ ವಿರುದ್ದ ಎಫ್ ಐಆರ್ ದಾಖಲಾಗಿದೆ.
ಎಫ್ಐಆರ್ ದಾಖಲಾದ ಬಳಿಕ ನಾಪತ್ತೆಯಾಗಿರುವ ತೇಜಸ್ ಗೆ ಶೋಧ ಕಾರ್ಯ ನಡೆಯುತ್ತಿದೆ ಎನ್ನಲಾಗುತ್ತಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
