ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಅಧ್ಯಯನ ವಿಷಯ ಕವಿ ಸಾಹಿತಿ ಯು ಜಗನ್ನಾಥ್ ಅವರ ಕೇಳು ಜಾಣ ಕೃತಿ ಕುರಿತು ಶಿಕ್ಷಕ ಗುರುಮೂರ್ತಿ ಕೇಳು ಜಾಣ ಕುರಿತು ಸ್ವ ವಿವರವಾಗಿ ತಿಳಿಸಿದರು.
ಕವಿ ಯು ಜಗನ್ನಾಥ್ ರವರು ರಚಿಸಿರುವ ಕೇಳು ಜಾಣ ಎಂಬ ಶೀರ್ಷಿಕೆ ಪುಸ್ತಕವನ್ನು ಓದುತ್ತಿದ್ದಂತೆಯೇ ಹಾಗೂ ಕವನ ಸಂಕಲನ ಪುಸ್ತಕಗಳನ್ನು ಓದುತ್ತಿದ್ದಂತೆಯೇ ಏನಿದು ಪುಸ್ತಕದಲ್ಲಿರುವ ವಿಷಯವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಮೂಡುತ್ತದೆ ಎಂದು ತಿಳಿಸಿದರು
ವಿದ್ವಾಂಸ ಹಿರಿಯ ಸಾಹಿತಿ ಅಕ್ಕಸಾಲಿ ವೃಷಭೇಂದ್ರ ಚಾರ್ ಮಾತನಾಡಿ ಕೂಡ್ಲಿಗಿ ತಾಲೂಕಿನ ನೆಲ ಅತ್ಯಂತ ಶ್ರೀಮಂತ ನೆಲ ಸಾಹಿತ್ಯಕ್ಕೆ ಕಲೆಗೆ ನಾಡು ನುಡಿಗಳ ತವರೂರು ಎಂದು ಬಣ್ಣಿಸಿದರು.

ಮತ್ತು ಈ ನಾಡಿನ ಪ್ರಖ್ಯಾತ ಸಾಹಿತಿಗಳೆಂದರೆ ಕೆಂಚಮಲ್ಲನಹಳ್ಳಿಯ ಗುರುಸಿದ್ದಯ್ಯ ಶಾಸ್ತ್ರಿಗಳು. ಕೋ ಚನಬಸಪ್ಪ. ಹಿ ಮಾ ನಾಗಯ್ಯ. ಡಾ.ಮರು ಸಿದ್ದಯ್ಯ. ವೃಷಭೇಂದ್ರ ಸ್ವಾಮಿ. ಸೇರಿದಂತೆ ಮುಂತಾದ ಸಾಹಿತ್ಯ ದಿಗ್ಗಜರು ಈ ನಾಡಿಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಇಂತಹ ಮಹನೀಯರ ಕೃತಿಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ನಂತರ ಶರಣ ಸಾಹಿತ್ಯ ಪರಿಷತ್ತಿನ ತಾಲೂಕ್ ಅಧ್ಯಕ್ಷರಾದ ಎನ್ಎಂ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೇಳು ಜಾಣ ಕೃತಿಯ ಲೇಖಕರು ಕವಿಗಳು ಸಾಹಿತಿಗಳಾದ ಯು ಜಗನ್ನಾಥ್. ಕವಿ ಪಿ ಓಂಕಾರಪ್ಪ ಮಾತನಾಡಿದರು.
ಮುಖ್ಯ ಗುರುಗಳಾದ ಬೊಮ್ಮಣ್ಣ. ಸಫಾರಿ ರಾಮಕೃಷ್ಣ. ಪೂಜಾರಹಳ್ಳಿ ಸಿದ್ದಲಿಂಗ ಮೂರ್ತಿ. ಶರಣನ ಗೌಡ್ರು. ವೀರೇಶ್ ಕಿಟ್ಟಪ್ಪ ನವರ್. ತಿಪ್ಪಿರಮ್ಮ. ಸುಜಾತಮ್ಮ. ಎಚ್ಚರಿಕೆ ಪತ್ರಿಕೆಯ ವರದಿಗಾರರಾದ ಕೆ ಎಸ್ ವೀರೇಶ್. ಲೋಕೇಶ್ ಕರಿಬಸಣ್ಣ. ಹೆಚ್ ಎನ್ ಗೋವಿಂದಮ್ಮ ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
