ಕೃಷಿ ಪತ್ತಿನ ಸಂಘಕ್ಕೆ ವೈ ಎಂ ವಿರೇಶ್ವರಯ್ಯ ಅಧ್ಯಕ್ಷರಾಗಿ ಆಯ್ಕೆ
ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಇಮಡಾಪುರ ಗ್ರಾಮದ ವೈ.ಎಂ.ವಿರೇಶ್ವರಯ್ಯ ಆಯ್ಕೆಯಾದರು. ಅವರು ಅವಿರೋಧವಾಗಿ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ವೈ.ಎಂ.ವಿರೇಶ್ವರಯ್ಯ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಕೃಷ್ಣನಾಯ್ಕ ಅವರು ಅವಿರೋಧ ಅಯ್ಕೆ ಘೋಷಿಸಿದರು. ಸಂಘದ ಉಪಾಧ್ಯಕ್ಷ ನಿಜಾಮುದ್ದಿನ್, ನಿರ್ದೇಶಕರಾದ ಕೆ. ಪ್ರಕಾಶ್, ಗೌರಮ್ಮ, ಪಿ ಬಸಮ್ಮ, ಹನುಮಪ್ಪ, ಕೆ.ಜಿ.ಭುವನೇಶ್ವರಿ, ಗಂಗಾಧರ, ನಾಗರಾಜ್,ಬಿ. ಈ ಜಗದೀಶ್ ಸಿದ್ದಪ್ಪ ಹಾಗೂ ಕುಮಾರ್ ಗೌಡ, ಸತೀಶ್, ಸಂಗಣ್ಣ ಸೇರಿದಂತೆ ಇತರರುಉಪಸ್ಥಿತರಿದ್ದರು.

ವರದಿ.ಕೆ. ಎಸ್. ವಿರೇಶ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
