ಎಂಬಿ,ಅಯ್ಯನಹಳ್ಳಿ.ದುಷ್ಕರ್ಮಿಗಳಿಂದ ತೋಟದ ಮನೆಗೆ ಬೆಂಕಿ…!!!

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲ್ಲೂಕು

ಎಂಬಿ,ಅಯ್ಯನಹಳ್ಳಿ.ದುಷ್ಕರ್ಮಿಗಳಿಂದ ತೋಟದ ಮನೆಗೆ ಬೆಂಕಿ.
ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಗೆಬರುವ ಎಂಬಿ ಅಯ್ಯನಹಳ್ಳಿ ಗ್ರಾಮದ ರೈತನಟರಾಜ ಎಂಬುವರ ಜಮೀನಿನಲ್ಲಿರುವ ತೋಟದ ಮನೆಗೆ ಯಾರೋ ದುಷ್ಕರ್ಮಿಗಳು ಬೆಂಕಿ ಇಟ್ಟಿರುತ್ತಾರೆ. ಜಮೀನಿನ ಮನೆಯಲ್ಲಿದ್ದ ಪಂಪು ಸ್ಟಾರ್ಟರ್ ಬೋರ್ಡ್ ಮೆನ್ಸ್ವೇರ್. ಸಿಸಿಟಿವಿ, ಡಿವಿಆರ್, ಮಾನಿಟರ್, ಸ್ಪ್ರಿಂಕ್ಲರ್, 18 ಚೀಲ ಗೊಬ್ಬರ ಹಾಗೂ ಕೃಷಿ ಪರಿಕರಗಳು ಸೇರಿ 2.26.550 ರೂಪಾಯಿ ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಯಾರೋ ದುಷ್ಕರ್ಮಿಗಳು ನಮಗೆ ನಷ್ಟ ಮಾಡುವ ಉದ್ದೇಶದಿಂದ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ಉದ್ದೇಶಪೂರ್ವಕವಾಗಿ ಜಮೀನಿನ ಮನೆಗೆ ಬೆಂಕಿ ಹಚ್ಚಿರುತ್ತಾರೆ , ಕಾರಣ ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸುವಂತೆ ಎಂ, ಬಿ, ಅಯ್ಯನಹಳ್ಳಿ ಗ್ರಾಮದ ರೈತ ನಟರಾಜ್ ಕೊಟ್ಟ ದೂರಿನಂತೆ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ…

ವರದಿ. ಡಿ.ಎಂ, ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend