*ನಾಣ್ಯಾಪುರ:ಕರಡಿ ದಾಳಿ ಯುವತಿ ತೀವ್ರಗಾಯ*- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು,ದಶ.ದಶಮಾಪುರ ಗ್ರಾಮ ಪಂಚಾಯ್ತಿ ವ್ತಾಪ್ತಿ ನಾಣ್ಯಪುರ ಗ್ರಾಮದಲ್ಲಿ. ಆಡು ಮೇಯಿಸಲು ಅರಣ್ಯದಂಚಿಗೆ ತೆರಳಿದ್ದ ಬೆನಳಮ್ಮ(20) ಯುವತಿಗೆ,ಕರಡಿ ದಾಳಿ ಮಾಡಿ ತೀವ್ರ ಗಾತಗೊಳಿಸಿದೆ.ಗ್ರಾಮದ ಹೊರವಲಯದ ಕರಡಿ ಗುಂಡುಗಳ ಬಳಿ,ತನ್ನ ಆಡುಗಳನ್ನು ಮೇಯಿಸಿಕೊಂಡಿರುವ ಸಂದರ್ಭದಲ್ಲಿ. ಕರಡಿ ಬೆನಳಮ್ಮ ಳ ಮೇಲೆ ಏಕಾ ಏಕಿ ದಾಳಿ ಮಾಡಿದೆ,ಬೆಬಳಮ್ಮಳ ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ.ತೀವ್ರ ಗಾಯಗೊಂಡ ಬೆನಳಮ್ಮ ಕಿರುಚಾಡಿದ್ದು,ಹತ್ತಿರದಲ್ಲಿಯೇ ದನ ಮೇಯಿಸುತುದ್ದ ದನಗಾಯಿಗಳು ನೆರವಿಗೆ ಬಂದು ಕರಡಿಯನ್ನು ಓಡಿಸಿದ್ದಾರೆ.ಪ್ರಾಣಾಪಾಯದಿಂದ ಪಾರಾದ ಬೆನಳಮ್ಮಳನ್ನು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿದ್ದು,ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿದೆ. ಕರಡಿ ದಾಳಿಯಿಂದ ಗಾಯಾಗೊಂಡ ಬೆನಳಮ್ಮಳಿಗೆ, ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಯವರು ಶೀಘ್ರವಾಗಿ ನೆರವು ನೀಡಬೇಕಿದೆ.ದಾಳಿಯಿಂದಾಗಿ ನಾಣ್ಯಾಪುರ ಗ್ರಾಮಸ್ಥರು ಆತಂಕಗೊಂಡಿದ್ದು, ಶೀಘ್ರವೇ ಕರಡಿ ಹಿಡಿದು ಕರಡಿದಾಮಕ್ಕೆ ಬಿಡಬೇಕೆಂದು. ಗ್ರಾಮದ ಮುಖಂಡರಾದ ದಿಬ್ಬದಳ್ಳಿ ಮಲ್ಲಪ್ಪ,ಗ್ರಾಮ ಪಂಚಾಯ್ತಿ ಸದಸ್ಯ ಬರ್ಲಿ ಚನ್ನಪ್ಪ,ಚನ್ನಬಸಪ್ಪ, ಮರಿಯಪ್ಪ,ಚಂದ್ರಪ್ಪ, ದುರುಗಪ್ಪ, ಕೊಟ್ರೇಶಪ್ಪ,ವೀರಭದ್ರಪ್ಪ,ತಳವಾರ ಆನಂದ,ತಿತ್ತಿನಾಗರಾಜ,ಈ ಮೂಲಕ ಒತ್ತಾಯಿಸಿದ್ದಾರೆ….

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
