ಕೂಡ್ಲಿಗಿ:ಡಿವೈಎಸ್ಪಿ ಕಚೇರಿಯಲ್ಲಿ ರಾಜ್ಯೋತ್ಸವ,ಮಕ್ಕಳಿಂದ ಸಂಗೀತ ಕಲರವ.
ಕೂಡ್ಲಿಗಿ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು, ಕನ್ನಡ ನಾಡ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕೂಡ್ಲಿಗಿ ಡಿವೈಎಸ್ಪಿ ಸೇರಿದಂತೆ ಸಿಪಿಐ,ಪಿಎಸೈ ಪೊಲೀಸ್ ಅಧಿಕಾರಿ ವರ್ಗ ಹಾಗೂ ಪೊಲೀಸ್ ಠಾಣಾ ಸಿಬ್ಬಂದಿಯವರು ಹಾಜರಿದ್ದರು.ನಂತರ ಪಟ್ಟಣದ ಸಂಗೀತ ಕಲಾವಿದರಾದ ಅಗಸಗಟ್ಟೆ ತಿಂದಪ್ಪ ಹಾಗೂ ನರಸಿಂಹಪ್ಪರವರು,ತಮ್ಮ ಶಿಷ್ಯವೃಂಧದೊಂದಿಗೆ ಕನ್ನಡ ನಾಡಗೀತೆ ಹಾಗೂ ನಾಡಭಕ್ತಿ ಗೀತೆಗಳನ್ನು ಹಾಡಿದರು. ಮಕ್ಕಳ ಸುಶ್ರಾವ್ಯವಾದ ಸಂಗೀತದೊಂದಿಗೆ ಕನ್ನಡ ಕಲರವ ಸೃಷ್ಟಿಯಾಗಿತ್ತು,ಈ ಮೂಲಕ ಕೂಡ್ಲಿಗಿ ಪೊಲೀಸರು ಕನ್ನಡ ರಾಜ್ಯೋತ್ಸವ ಬಹು ಅರ್ಥಪೂರ್ಣವಾಗಿ ಆಚರಿಸಿದರು.

✍️… ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
