ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಪ್ರತಿ ವರ್ಷವೂ,ಮಲೇರಿಯಾ ಮತ್ತು ಡೆಂಗು ಕಾಯಿಲೆಗಳು ಶುರು ಜಾಗೃತರಾಗಿರುವುದು ಒಳಿತು…!!!!

ಮಲೇರಿಯಾ ಮತ್ತು ಡೆಂಗು ಕಾಯಿಲೆಗಳು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಪ್ರತಿ ವರ್ಷವೂ, ಇಂತಹ ಮಾರಾಣಾಂತಿಕ ಕಾಯಿಲೆಗಳು ನಮ್ಮನ್ನು ತಲ್ಲಣಗೊಳಿಸುವಂತೆ ಮಾಡುತ್ತದೆ. ಈ ಬಾರಿಯ ವಿಶ್ವ ಸೊಳ್ಳೆಗಳ ದಿನದವಿಶ್ವ ಸೊಳ್ಳೆಗಳ ದಿನಾಚರಣೆ :2021
ಶೂನ್ಯ ಮಲೇರಿಯಾ ಗುರಿ
ಈ ಬಾರಿ ಶೂನ್ಯ ಮಲೇರಿಯಾ ಗುರಿ ಎಂಬ ಪರಿಕಲ್ಪನೆಯೊಂದಿಗೆ ವಿಶ್ವ ಸೊಳ್ಳೆಗಳ ದಿನವನ್ನು ಆಚರಿಸಲಾಗುತ್ತಿದೆ.. ಹಿನ್ನೆಲೆಯಲ್ಲಿ ಈ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳೋಣ!!!!!!!ಅಷ್ಟೇ

ಅಲ್ಲ,ಇವುಗಳು ಸಣ್ಣ ಜೀವಿಗಳಾದರೂ, ವಿಶ್ವದಲ್ಲಿ ಅತ್ಯಂತ ಅಪಾಯಕಾರಿ ಎಂದೇ ಪರಿಗಣಿಸಲ್ಪಟ್ಟಿವೆ.
ಪ್ರತಿ ವರ್ಷ ಈ ಅಪಾಯಕಾರಿ ಕಾಯಿಲೆಗೆ ಅನೇಕ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ ಮಲೇರಿಯಾ!
ಮಲೇರಿಯಾ: ಮುಂಜಾನೆ ಹಾಗೂ ಮುಸ್ಸಂಜೆಯ ವೇಳೆಯೇ ಹೆಚ್ಚು!
ಪ್ಲಾಸ್ಮೋಡಿಯಂ ಎಂಬ ಜೀವಿಯಿಂದ ಮಲೇರಿಯಾ ಸೋಂಕು ಉಲ್ಬಣವಾಗುತ್ತದೆ ಅಲ್ಲದೆ, ಅನಾಫಿಲಿಸ್‌ ಎಂಬ ಹೆಣ್ಣು ಸೊಳ್ಳೆ ಕಡಿತದಿಂದ ಮನುಷ್ಯನಿಗೆ ಮಲೇರಿಯಾ ಬಾಧಿಸುತ್ತದೆ. ಸುಮಾರು 18 ದಿನಗಳ ಕಾಲ ಈ ಸೋಂಕು ಸೊಳ್ಳೆಯಲ್ಲಿ ಬೆಳೆಯುತ್ತದೆ. ಸೊಳ್ಳೆ ಒಬ್ಬ ವ್ಯಕ್ತಿಗೆ ಕಚ್ಚುವ ವೇಳೆ ಸಲೈವಾ ದ ಮೂಲಕ ಮನುಷ್ಯ ದೇಹವನ್ನು ಸೇರಿ ಕಾಯಿಲೆ ಉಲ್ಬಣಗೊಳ್ಳತ್ತದೆ. ಸೋಂಉ ತಗುಲಿದ ವ್ಯಕ್ತಿಯಲ್ಲಿ ವಿಪರೀತ ಜ್ವರ, ಮೈ ನಡುಗಿಸುವ ಚಳಿ, ಅತಿಯಾಗಿ ಬೆವರುವಿಕೆ, ತಲೆನೋವು ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮಲೇರಿಯಾ ಸೋಂಕು ಅತಿಯಾದಲ್ಲಿ ಮೂತ್ರಪಿಂಡಗಳು ವಿಫಲಗೊಳ್ಳುವ ಸಾಧ್ಯತೆ ಹೆಚ್ಚು. ಅಲ್ಲದೆ ಸಾವು ಸಹ ಸಂಭವಿಸಬಹುದು.

ಸಾಮಾನ್ಯವಾಗಿ ಮುಂಜಾನೆ ಹಾಗೂ ಮುಸ್ಸಂಜೆ ವೇಳೆ ಈ ಸೊಳ್ಳೆಗಳು ದಾಳಿ ನಡೆಸುತ್ತದೆ. ಮಳೆ ನೀರು ನಿಲ್ಲುವ ಸ್ಥಳಗಳು, ಹಳೆಯ ಖಾಲಿ ಪಾತ್ರೆಯಲ್ಲಿ ಮಳೆ ನೀರು ಶೇಖರಣೆಗೊಂಡಲ್ಲಿ ಈ ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಪ್ರತಿ ವರ್ಷ ವಿಶ್ವದಲ್ಲಿ ಸುಮಾರು 2 ಕೋಟಿ ಜನರು ಮಲೇರಿಯಾ ಸೋಂಕಿಗೆ ತುತ್ತಾಗುತ್ತಾರೆ ಹಾಗೂ 4 ಲಕ್ಷ ಮಂದಿ ಸಾವನ್ನಪ್ಪುತ್ತಾರೆ ಎಂದು ತಿಳಿದು ಬಂದಿದೆ.
ಡೆಂಘೆ : ಮುಂಜಾನೆ ಹಾಗೂ ರಾತ್ರಿ ವೇಳೆ ಅಪಾಯ ಹೆಚ್ಚು
ಈಡಿಸ್‌ ಸೊಳ್ಳೆಯ ಮೂಲಕ ಹರಡುವ ಅಪಾಯಕಾರಿ ಕಾಯಿಲೆಯೇ ಡೆಂಘೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಮುಂಜಾನೆ ಹಾಗೂ ಸೂರ್ಯ ಮುಳುಗಿದ ಬಳಿಕ ಹೆಚ್ಚಾಗಿ ದಾಳಿ ನಡೆಸುತ್ತವೆ. ಅತಿ ಸಣ್ಣ ಅಥವಾ ಸ್ವಲ್ಪವೇ ಪ್ರಮಾಣದ ನೀರಿನಲ್ಲಿ ಇವುಗಳು ಮೊಟ್ಟೆಗಳನ್ನಿಡುತ್ತವೆ. ಅಷ್ಟು ಮಾತ್ರವಲ್ಲ, ಈ ಮೊಟ್ಟೆಗಳು ನೀರಿಲ್ಲದೆಯೇ ಒಂದು ವರ್ಷಕ್ಕೂ ಹೆಚ್ಚು ಸಮಯ ಜೀವಂತವಾಗಿರಬಲ್ಲವು!
ಅತಿಯಾದ ಜ್ವರ, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸ ಖಂಡಗಳಲ್ಲಿ ನೊವು, ಅತಿಯಾದ ತಲೆ ನೋವು ಡೆಂಘೆ ಸೋಂಕಿತರಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣಗಳು. ಅನೇಕರಿಗೆ ಚರ್ಮದಲ್ಲಿ ದದ್ದುಗಳು ಕಂಡು ಬಂದರೆ, ವಾಂತಿ-ಬೇಧಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ. ಸೋಂಕು ಮಿತಿ ಮೀರಿದಲ್ಲಿ ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿ, ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪುವ ಸಾಧ್ಯತೆಗಳೂ ಇರುವುದು. ವಿಶ್ವದಲ್ಲಿ ವಾರ್ಷಿಕ ಸುಮಾರು 10-40 ಕೋಟಿ ಮಂದಿ ಡೆಂಘೆ ಸೋಂಕಿಗೆ ತುತ್ತಾಗುತ್ತಾರೆ. ಡೆಂಘೆಗೆ ನಿರ್ದಿಷ್ಟವಾದ ಔಷಧ ಈ ವರೆಗೆ ಕಂಡು ಹಿಡಿಯಲಾಗಿಲ್ಲ. ಸರಿಯಾದ ಸಮಯದಲ್ಲಿ ಸೂಕ್ತ ವೈದ್ಯಕೀಯ ನೆರವು ಸಿಕ್ಕಲ್ಲಿ, ಮರಣದ ಸಾಧ್ಯತೆ ಕಡಿಮೆ ಎನ್ನಲಾಗಿದೆ!
ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಗೆ ಎರಡನೇ ಬಾರಿಗೆ ಡೆಂಘಡ ಮರುಕಳಿಸುವ ಸಾಧ್ಯತೆಗಳೂ ಇವೆ ಹಾಗೂ ಈ ರೀತಿ ಆದಲ್ಲಿ ಇದು ಮತ್ತಷ್ಟು ಅಪಾಯಕಾರಿ ಎನ್ನಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಸುಮಾರು 9 ಕೋಟಿ ಮಂದಿಯಲ್ಲಿ 40 ಸಾವಿರ ಜನರು ಸಾವಿಗೀಡಾಗಿದ್ದಾರೆ!
ಸೊಳ್ಳೆಗಳಿಂದ ದೂರವಿರಲು ಏನು ಮಾಡಬೇಕು?
ಇಂತಹ ಅಪಾಯಕಾರಿ ಕಾಯಿಲೆಗಳಿಗೆ ನೀವು ತುತ್ತಾಗಬಾರದು ಎಂದಾದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. ಅದರಲ್ಲೂ ಪ್ರಮುಖವಾಗಿ ಪ್ರಸ್ತುತ ಮಳೆಯ ವಾತಾವರಣದಲ್ಲಿ! ಏತನ್ಮಧ್ಯೆ ಸುರಕ್ಷತೆ ಎಂದಾಕ್ಷಣ ಪ್ರಮುಖ ಅಂಶ, ಜಾಗೃತಿಯೇ ಆಗಿರುತ್ತದೆ. ಹೀಗಾಗಿ ನಿಮ್ಮ ಸುತ್ತಮುತ್ತಲು ಸೊಳ್ಳೆಗಳ ಉತ್ಪತ್ತಿಯ ಪ್ರದೇಶಗಳನ್ನು ಮೊದಲಿಗೆ ಗುರುತಿಸಿ, ಇಲ್ಲಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಬೇಕು!
1. ಬೇಡದ ಸ್ಥಳದಲ್ಲಿ ನೀರು ಶೇಖರಣೆಗೊಳ್ಳುವುದನ್ನು ತಡೆಗಟ್ಟಿ
ಫ್ರಿಡ್ಜ್‌, ಎಸಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ನೀರು ಶೇಖರಣೆಗೊಳ್ಳುವುದನ್ನು ತಡೆಯಿರಿ. ಮಳೆಗಾಲದಲ್ಲಿ ಬೇಡವಾದ ನೀರು ಬಕೆಟ್‌ಗಳಲ್ಲಿ ಶೇಖರಣೆಗೊಳ್ಳದಂತೆ ನೋಡಿಕೊಳ್ಳಿ. ಅಷ್ಟೇ ಅಲ್ಲ ಮನೆಯಲ್ಲಿರುವ ಕೂಲರ್‌ನಿಂದ ನಿಯಮಿತವಾಗಿ ನೀರು ಖಾಲಿ ಮಾಡಿ ಹಾಗೂ ಅವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಏಕೆಂದರೆ ನಿಂತ ನೀರು ಸೊಳ್ಳೆಗಳ ಉತ್ಪತ್ತಿಗೆ ಸೂಕ್ತ ಸ್ಥಳವಾಗಿದೆ.
2. ಸುತ್ತಮುತ್ತಲ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವುದು
ಮನೆಯ ಡ್ರೇನೇಜ್‌ ವ್ಯವಸ್ಥೆ, ಅಡುಗೆ ಮನೆಯಿಂದ ಹೊರ ಹೋಗುವ ನೀರಿನ ಹರಿನ ವ್ಯವಸ್ಥೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು. ಅಂತೆಯೇ ಮನೆಯಲ್ಲಿರುವ ಕಸದ ತೊಟ್ಟಿ ಅಥವಾ ಮನೆಯ ಹತ್ತಿರಲ್ಲಿರುವ ಕಸ ಎಸೆಯುವ ಸ್ಥಳ ಇತ್ಯಾದಿಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಅತಿಯಾಗಿರುತ್ತದೆ. ಈ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದರಿಂದ ನೀವು ಹಾಗೂ ಮನೆ ಸುತ್ತಮುತ್ತಲ ಜನರೂ ಆರೋಗ್ಯದಿಂದರಲು ಸಹಕಾರಿಯಾಗುತ್ತದೆ.
3. ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಿ!
ನವಜಾತ ಶಿಶುಗಳು, ಮಕ್ಕಳು ಹಾಗೂ ವಯಸ್ಕರು ಮಲೇರಿಯಾ ಹಾಗೂ ಡೆಂಘೆ ಸೋಂಕಿಗೆ ಸುಲಭವಾಗಿ ತುತ್ತಾಗುತ್ತಾರೆ. ಇದಕ್ಕಾಗಿಯೇ ಮನೆಯಿಂದ ಹೊರ ಹೋಗುವ ವೇಳೆ ಸೊಳ್ಳೆ ಕಡಿತದಿಂದ ಪಾರಾಗುವ ಎಲ್ಲ ಕ್ರಮಗಳನ್ನು ಅನುಸರಿಸಿ. ಪೂರ್ಣ ಪ್ರಮಾಣದ ಬಟ್ಟೆ ಧರಿಸಿ. ಪೂರ್ಣ ಕೈ ಹೊಂದಿರುವ ಶರ್ಟ್‌ಗಳನ್ನು ಧರಿಸಿ.
3. ಮುಸ್ಸಂಜೆ ವೇಳೆ ಕಿಟಕಿ, ಬಾಗಿಲು ಮುಚ್ಚಿ
ಮುಸ್ಸಂಜೆ ವೇಳೆಯಲ್ಲಿ ಸೊಳ್ಳೆಗಳು ಹೆಚ್ಚು. ಹೀಗಾಗಿಯೇ ಈ ವೇಳೆ ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚಿ, ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯಿರಿ. ಕಪ್ಪು ಹಿಟ್‌ ಬಳಸಬಹುದು. ಅಲ್ಲದೆ ಸೊಳ್ಳೆ ಪರದೆ ಬಳಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
. ನಮಗೆ ಹಾಗೂ ನಮ್ಮ ಪ್ರೀತಿ ಪಾತ್ರರಿಗೆ ನಾವು ಒಂದು ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಪ್ರಯತ್ನ ಇದಾಗಿದೆ. ಆರೋಗ್ಯ ಕಾಪಾಡಿಕೊಳ್ಳುವ ಅನೇಕ ವಿಧಾನಗಳನ್ನು ಅನುಸರಿಸುವ ಮೂಲಕ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೆ ಜಾಗೃತಿ ವಿಚಾರಗಳ ಬಗ್ಗೆ ಇನ್ನೂ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ, ಹಿಟ್‌ ನೂತನ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ನೀವು ಹಾಗೂ ನಿಮ್ಮ ಪ್ರೀತಿ ಪಾತ್ರರನ್ನು ಸೊಳ್ಳೆಗಳಿಂದ ಸುರಕ್ಷಿತವಾಗಿ ನೋಡಿಕೊಳ್ಳುವ ಬಗೆಯನ್ನು ವಿವರಿಸಲಾಗಿದೆ.

ಅಪಾಯಕಾರಿ ಕಾಯಿಲೆ ಬಗ್ಗೆ ಮನಮುಟ್ಟುವಂತೆ ಜಾಗೃತಿ ಕಾರ್ಯಕ್ರಮ ಮಾಡುವುದು ಮುಖ್ಯ. ಸೊಳ್ಳೆ ಕಡಿತದಿಂದ ಪಾರಾಗುವ ಅನೇಕ ಬಗೆಯ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಇದು ಜಾಗತಿಕ ಮಟ್ಟದಲ್ಲಿ ಸದೃಢ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ನಮ್ಮ ಸುರಕ್ಷತೆ ನಮ್ಮ ಕೈಯಲ್ಲೇ ಇದೆ.
ಡಿ.ರುದ್ರಾಚಾರಿ
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಹರಪನಹಳ್ಳಿ…

 

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend