ಕೃಷ್ಣಾ ನದಿ ತೀರದ ಹಿಪ್ಪರಗಿ ಬ್ರಿಜ್ಜಿನ ಸುತ್ತ್ತಮುತ್ತ ಮಣ್ಣು ಕದಿಯುತ್ತಿರುವ ಕದಿಮರು…!!!

ಕೃಷ್ಣಾ ನದಿ ತೀರದ ಹಿಪ್ಪರಗಿ ಬ್ರಿಜ್ಜಿನ ಸುತ್ತ್ತಮುತ್ತ ಮಣ್ಣು ಕದಿಯುತ್ತಿರುವ ಕದಿಮರು.

ಶುಕ್ರವಾರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಹತ್ತಿರ ಹಗಲು ದರುಡೆಗಿಳಿದ ದರೋಡೆ ಕೊರರು.ಕೃಷ್ಣಾ ನದಿಯ ಪಕ್ಕದಲ್ಲಿರುವ ಮಣ್ಣನ್ನು 10 ರಿಂದ 15 ಪುಟುಗಳ ವರೆಗೆ ಅಗೆದು ಫಲವತ್ತಾದ ಮಣ್ಣನ್ನು ಸಾಗಿಸುತಿದ್ದು ಸ್ಪಷ್ಟವಾಗಿ ಕಂಡು ಬಂದಿದೆ ಕದಿಮರ ಹೆಸರು 1)ಲಾಲಸಾಬ ನದಾಫ್ ಇವನು ಕೃಷ್ಣಾ ನದಿಗೆ ದೊಡ್ಡಪ್ಪ ಇರಬಹುದು ಇನ್ನೊಬ್ಬ 2)ಮಹೇಶ್ ಅಂತಾ ಇತಾ ಮಾಡೋ ಕೆಲಸ ಹೇಸಿಗೆ ತಿನ್ನೋ ಕೆಲಸಾ ಇಂತವರನ್ನು ಇನ್ನೂ ಯಾಕೆ ಅಧಿಕಾರಿಗಳು ದಂಡನೆ ನೀಡಿಲ್ಲ ಅನ್ನೋದೇ ಅನುಮಾನ ಹುಟ್ಟು ಹಾಕಿದೆ. ಈ ಕಾಮಗಾರಿಗೆ ಮೇಲಾಧಿಕಾರಿಗಳು ಶಾಮೀಲು ಇರಬಹುದು ಏಕೆಂದರೆ ರಾಜಾರೋಷವಾಗಿ ಜೆಸಿಬಿ ಟ್ರ್ಯಾಕ್ಟರ್ ಟಿಪ್ಪರ್ ಬಳಸಿ ಬಳಕೆ ಮಾಡುತ್ತಿರುವುದು ನೋಡಿದ್ರೆ ಗೊತ್ತಾಗುತ್ತೆ ಇದಕ್ಕೆ ಇನ್ನೂ ಕಡಿವಾಣ ಯಾವಾಗ್. ಅಥಣಿ ತಹಶೀಲ್ದಾರ್ ಕೋಮರ ಮತ್ತು ಸವದಿ ಗ್ರಾಮ ಲೆಕ್ಕಾಧಿಕಾರಿ ಗೋಪಾಲ ಹಸಿಲೇಕ್ಕರ್ ಇವರನ್ನು ಫೋನ್ ಮೂಲಕ ಕರೆ ಮಾಡಿ ಸಂದಿಸಿದರು ಹತ್ತಾರು ಬಾರಿ ಕರೆ ಮಾಡಿದರು ಬಾರದ ಅಧಿಕಾರಿಗಳು.ಇಲ್ಲಿ ಸಂದೇಹ ಮೂಡುವುದು ಸರ್ವೇಸಾಮಾನ್ಯ ಸಂಬಳಕಿಂತ ಗಿಂಬಲಕ್ಕೆ ಬೆಲೆ ಇರೋದು ಅಂತಾ ಗಿಂಬಳಕ್ಕೆ ಹಂಬಲಿಸುವ ಅಧಿಕಾರಿಗಳು ಇರಬೇಕಾ.ಸರಕಾರದ ಮುಂದೆ ಯಾರೂ ದೊಡ್ಡೋರು ಅಲ್ಲ ಕಾನೂನಿಗೆ ಎಲ್ಲರೂ ತೆಲೆ ಬಾಗಲೇ ಬೇಕು ಅದನ್ನು ಇವರು ಅರಿತಿಲ್ಲ ಅನಿಸುತ್ತೆ. ಇಂತ ಫಲವತ್ತಾದ ಮಣ್ಣನ್ನು ಇಟ್ಟಿಗೆ ತಯಾರು ಮಾಡಲು ಬಳಸುತ್ತಾರೆ ಎಂದು ಕಂಡುಬಂದಿದೆ ಇದರ ಜೊತೆ ಕರಿ ಕೊಲ್ಸಾ ಕಲ್ಲಿದ್ದಲು ಕಬ್ಬಿನ ಹೊಟ್ಟು ಇನ್ನಿತರ ವಸ್ತುಗಳನ್ನು ಹಾಕಿ ತಯಾರಿಸುತ್ತಾರೆ ಅರ್ಧಕ್ಕೂ ಹೆಚ್ಚು ವಾಯು ಮಾಲಿನ್ಯ ಮಾಡಿರುವುದು ಇವರೇನೆ ಮತ್ತು ಪ್ರತಿಯೊಂದು ಇಟ್ಟಿಗೆ ಬಟಿಯಲ್ಲಿ ಚಿಕ್ಕಚಿಕ್ಕ ಮಕ್ಕಳು ಕಾರ್ಯ ನಿರ್ವಹಿಸುತ್ತಾರೆ. ಇದೆಲ್ಲ ಕೊನೆ ಆಗದಿದ್ದರೆ ಸರಕಾರದ ನಿಯಮ ಉಲ್ಲಂಗಿಸಿದಂತೆ ಕರ್ತ್ಯವೆಕ್ಕೆ ಲೋಪ ಎಸಗಿದ೦ತೆ ಇನ್ನಾದರೂ ಕಾನೂನಿನ ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತಾರಾ..? ಅನ್ನೋದನ್ನ ಕಾದು ನೋಡಬೇಕಾಗಿದೆ. ಇದು ಎಚ್ಚರಿಕೆ ಪತ್ರಿಕೆಯ ವಿಶೇಷ ಎಚ್ಚರಿಕಾ ವರದಿ

ವರದಿ. ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend