ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

ದಿನಾಂಕ.12.2.2021. ಬಳ್ಳಾರಿ ಜಿಲ್ಲಾ ಕೊಟ್ಟೂರು
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ.:– ರಾಜ್ಯ ಸರ್ಕಾರದ ಅನುಮತಿ
ಲಕ್ಷಾಂತರ ಭಕ್ತರ ಆರಾಧ್ಯದೈವ ಪವಾಡ ಪುರುಷನೆಂಬ ಹೆಸರು ಪಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಮಾರ್ಚ್ 7ರಂದು ಲಕ್ಷಾಂತರ ಭಕ್ತರ ಸಮೂಹದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ರಥೋತ್ಸವದ ಬಗ್ಗೆ ಸರ್ಕಾರದ ಅನುಮತಿ ಬಗ್ಗೆ ಭಕ್ತರಲ್ಲಿ ಗೊಂದಲಕ್ಕೀಡುಮಾಡಿತ್ತು ಆದರೆ ಸ್ವಾಮಿಯ ಕೃಪೆಯಿಂದ ರಾಜ್ಯ ಸರ್ಕಾರದಿಂದ ರಥೋತ್ಸವ ನಡೆಸಲು ಅನುಮತಿ ಸಿಕ್ಕಿರುವುದರಿಂದ ಭಕ್ತರಲ್ಲಿ ಸಂತಸ ತಂದಿದೆ. ಈ ಹಿಂದೆ ರಥೋತ್ಸವ ನಡೆದ ಬಳಿಕ ಕರೋನವೈರಸ್ ವ್ಯಾಪಕವಾಗಿ ಹೋರಾಡುವುದರ ಹಿನ್ನೆಲೆಯಲ ಲಾಕ್ ಡೌನ್ ಮಾಡಲಾಗಿತ್ತು ಆಗಿತ್ತು ಆದರೆ ಮತ್ತೆ ಪುನಃ ರಥೋತ್ಸವಕ್ಕೆ ಯಾವುದೇ ನಿರ್ಬಂಧವಿಲ್ಲದೆ ವಿಜ್ರಂಭಣೆ ಇಂದ ನಡೆಯುವುದೆಂದು ಬಲ್ಲಮೂಲಗಳಿಂದ ತಿಳಿದು ಬಂದಿರುತ್ತದೆ ಶ್ರೀ ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ರಥೋತ್ಸವ ಯಾವುದೇ ನಿರ್ಬಂಧವಿಲ್ಲದೆ ನಡೆಯುವುದು ಪವಾಡ ಪುರುಷನ ಪವಾಡವೇ ಸರಿ ಎಂದು ಭಕ್ತಾದಿಗಳು ಮಾತನಾಡುತ್ತಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
