ಎಚ್ಚರಿಕೆ ನ್ಯೂಸ್ ಮತ್ತೆ ಭ್ರಷ್ಟರ ಬೇಟೆಗೆ ಸನ್ನದ್ದ ತನಿಖೆಗೆ ಬಂದ ರಾಮದುರ್ಗ ತಾಲೂಕ ಪಂಚಾಯತ ಅಧಿಕಾರಿಗಳು…!!!

ತನಿಖೆಗೆ ಬಂದ ರಾಮದುರ್ಗ ತಾಲೂಕ ಪಂಚಾಯತ ಅಧಿಕಾರಿಗಳು: ನರೇಗಾ ಕಾಮಗಾರಿ ಕೈಗೊಳ್ಳದೇ, ರೈತನ ಹಳೆ ಮನೆಯನ್ನೇ ದನದ ಶೆಡ್ ನಿರ್ಮಾಣವೆಂದು 2020 ರಲ್ಲಿ ಖೊಟ್ಟಿ ಬಿಲ್ ಪಾವತಿಸಿದ ಓಬಳಾಪೂರ ಗ್ರಾಮ ಪಂಚಾಯಿತಿಯ ಭ್ರಷ್ಟ ಅಧಿಕಾರಿಗಳು,1)ಇಂದಿನವರೆಗೂ ದನಗಳನ್ನು ಬಯಲಿಗೆ ಕಟ್ಟುತ್ತಿರುವ ರೈತರು 2) ಹಳೆ ಮನೆಯನ್ನು 4-5 ವರ್ಷದ ಹಿಂದೆ ಸ್ವಂತ ನಿರ್ಮಿಸಿದ್ದು ರೈತರ ಹೇಳಿಕೆ 3)ತನಿಖೆಯಲ್ಲಿ ಸ್ರಷ್ಟಿಸಿದ ಕಾಮಗಾರಿ ದಾಖಲೆಗಳನ್ನು ತೋರಿಸಿರುವದಿಲ್ಲ. 4) ಇಂದಿನ ತನಿಖೆಯ 15 ದಿನದ ಮೊದಲು ರೈತನ ಮನೆಗೆ 5 ಜನ ಹೋಗಿ ಜೀವ ಬೆದರಿಕೆ ಒಡ್ಡಿ ಸಹಿ ಮಾಡಿಸಿದ್ದು ರೈತನ ಹೇಳಿಕೆ, ದಿನಾಂಕ ನಮೋದಿಲ್ಲದ ಪತ್ರ ಓದಿದ್ದು,ದುಷ್ಕರ್ಮಿಗಳು ರೈತನಿಗೆ ಪತ್ರದ ವಿವರ ಓದದೇ ಮೋಸಮಾಡಿ ಬೆದರಿಸಿದ ಬಗ್ಗೆ ರೈತರು ತನಿಖೆಯಲ್ಲಿ ಹೇಳಿದ್ದು.

6)ಕೊಟ್ಟಿಗೆ ಬಿಲ್ ಪಾವತಿಸಿದ ಭ್ರಷ್ಟ ಅಧಿಕಾರಿಗಳ ಕುಮ್ಮಕ್ಕಿನಿಂದ ಬಡ ರೈತರನ್ನು ಬೆದರಿಸಿ ಮೋಸದಿಂದ ಸಹಿ ಮಾಡಿಸಿದ ದುಷ್ಕರ್ಮಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದೂರುದಾರರು ಒತ್ತಾಯಿಸಿದ್ದು 7) ಎನ್ ಎಂ ಆರ್ ಪ್ರತಿಯಲ್ಲಿ ವಿದ್ಯಾರ್ಥಿಗಳ ಹೆಸರು ಮತ್ತು ನಮೂದಿಸಿದ ಕೂಲಿಕಾರ್ಮಿಕರು ಕೆಲಸ ಮಾಡಿದ ಬಗ್ಗೆ, ಕಾಮಗಾರಿ ಪ್ರಗತಿ ಬಗ್ಗೆ ಯಾವದೇ ದಾಖಲೆ ಪೋಟೋ ,ಜಿಪಿಎಸ್ ಪೋಟೋ ಯಾವದು ತೋರಿಸಿರುವದಿಲ್ಲ,8)ಹಳೆ ಮನೆಯನ್ನೇ ನಕಲಿ ಜಿಪಿಎಸ್ ಮಾಡಿದ್ದು ವೆಬ್ಸೈಟ್ ನಲ್ಲಿ ಅಳವಡಿಸಿದ್ದಾರೆ.9)ತನಿಖೆಗೆ ಹಾಜರಿದ್ದವರು ಎಂದು ಮಾತ್ರ ಎಲ್ಲರ ಸಹಿ ತೆಗೆದುಕೊಂಡಿದ್ದಾರೆ 10)ನರೇಗಾ ಉದ್ಯೋಗವಾಗಲಿ, ದನದ ಶೆಡ್ ನಿರ್ಮಾಣವಾಗಲಿ ಪಂಚಾಯತಿಯವರು ನಮಗೆ ಒದಗಿಸಿರುವದಿಲ್ಲ, ಏನು ಗೊತ್ತಿಲ್ಲವೆಂದು ರೈತರು ಸ್ಪಷ್ಟಪಡಿಸಿದ್ದಾರೆ.

ಗಂಭೀರ ಪ್ರಕರಣದ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯು ಖಚಿತ. ಭ್ರಷ್ಟರನ್ನು ಕ್ರಿಮಿನಲ್ ಪ್ರಕರಣದಿಂದ ರಕ್ಷಿಸಲು ಪ್ರಯತ್ನಿಸುವ ಎಲ್ಲ ಬ್ರಷ್ಟಾಧಿಕಾರಿಗಳಿಗೂ ವಿರುದ್ದವು ಶಿಸ್ತು ಕಾನೂನು ಕ್ರಮವು ಖಂಡಿತ.ದನದ ಶೆಡ್ ನಿರ್ಮಾಣ, ನಿಯಮಾನುಸಾರ ಯಾವ ರೀತಿ ಕಟ್ಟಬೇಕು,ಖೊಟ್ಟಿ ಬಿಲ್ ಪಾವತಿಸಿದ ಭ್ರಷ್ಟ ಅಧಿಕಾರಿಗಳು ಉತ್ತರಿಸಬೇಕು…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend