ಬೆಳಗೋಡು ಹಾಳ್ ಗ್ರಾಮದದಿಂದ ಕಂಪ್ಲಿಗೆ ಹೋಗುವ ರಸ್ತೆ ಕಾಮಗಾರಿ ವಿಳಂಬ ದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ. ಡಾ!! ಬಿ.ಆರ್ ಅಂಬೇಡ್ಕರ್ ದಲಿತ ಸಂಘ ದಲಿತ ಸಂಘದ ವತಿಯಿಂದ ಆಗ್ರಹ
ಕಂಪ್ಲಿ: ಕಂಪ್ಲಿ ತಾಲೂಕಿನ ಬೆಳಗೋಡು ಹಾಳ್ ಗ್ರಾಮದಿಂದ ಕಂಪ್ಲಿ ತಾಲೂಕು ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯು ಹಲವು ತಿಂಗಳಿಂದಲ್ಲೂ ಆಮೆ ವೇಗದಲ್ಲಿ ಸಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಎಂದು ಡಾ!! ಬಿ.ಆರ್ ಅಂಬೇಡ್ಕರ್ ದಲಿತ ಸಂಘ ದಲಿತ ಸಂಘದ ವತಿಯಿಂದ
ಕೆ.ಪಿ.ಟಿ.ಸಿ.ಎಲ್. ಇಲಾಖೆ ಕಡೆಯಿಂದ ಬೆಳಗೋಡು ಹಾಳ್ ಗ್ರಾಮದಿಂದ ಕಂಪ್ಲಿ ತಾಲೂಕು ಸಂಪರ್ಕ ಕಲ್ಪಿಸುವ 4.ಕಿ.ಮಿ. ರಸ್ತೆ ಇದಾಗಿದೆ. ರಸ್ತೆ ಅಭಿವೃದ್ಧಿ ಸೇರಿ ಕಾಮಗಾರಿಗಳಿಂದ ಒಟ್ಟು 73 ಲಕ್ಷ ರೂ. ಗಳ ಕೆ.ಪಿ.ಟಿ.ಸಿ.ಎಲ್. ಇಲಾಖೆ ಕಡೆಯಿಂದ ಅನುದಾನ ಬಿಡುಗಡೆಯಾಗಿದೆ.
ಮೇಲೆದ್ದಿವೆ ಬಿಂಚೆ ಕಲ್ಲು: ಕಳೆದ ಹಲವು ತಿಂಗಳ ಹಿಂದೆ ಕಾಮಗಾರಿಯನ್ನು ಈಗ ಕೆಲ ತಿಂಗಳಿಂದ ಕಾಮಗಾರಿ ಶುರುವಾಗಿ ರಸ್ತೆಗೆ ಬಿಂಚೆ ಕಲ್ಲು ಮೇಲೆದ್ದಿವೆ ಸಮರ್ಪಕವಾಗಿ ಮಾಡದ ಹಿನ್ನಲೆಯಲ್ಲಿ ಜಲ್ಲಿಕಲ್ಲು ಮೇಲೆದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ರಸ್ತೆ ಕಾಮಗಾರಿ ಸ್ಥಗಿತ: ತಿಂಗಳ ಹಿಂದೆ
ಪ್ರಾರಂಭವಾದ ಕಾಮಗಾರಿ ಜಲ್ಲಿ ಹಾಕಿ ವಾಹನ ಸಂಚಾರಕ್ಕೆ ಕಷ್ಟ ಪಡಬೇಕಾಗಿದೆ. ರಸ್ತೆ ಕಾಮಗಾರಿ ಸ್ಥಗಿತಗೊಂಡ ಹಿನ್ನಲೆಯಲ್ಲಿ ಜಲ್ಲಿ ಕಲ್ಲನ್ನು ತುಳಿದುಕೊಂಡು ಸಂಚಾರ ಮಾಡುವಂತಾಗಿದೆ. ಇದರಿಂದ ದಿನ ನಿತ್ಯ ಸಂಚಾರ ಮಾಡುವ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಕಾಮಗಾರಿಯನ್ನು ಕೈಗೆತ್ತಿಕೊಂಡ ನಂತರ ಅದನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬ ಮಾಡಿದರೆ ಸಾರ್ವಜನಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ರಸ್ತೆ ಡಾಂಬರೀಕರಣ ಮಾಡುವವರೆಗಾದರೂ ಮೆಟ್ಲಿಂಗ್ಗೆ ನೀರು ಹಾಕಿಸಿ, ರಸ್ತೆಯನ್ನು ಸಮತಟ್ಟು ಮಾಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸಂಬಂಧಪಟ್ಟ ಇಲಾಖೆಯವರು ಗುತ್ತಿದಾರರಿಗೆ ಸೂಚನೆ ನೀಡಬೇಕು.
ಎಂದು ಡಾ!! ಬಿ.ಆರ್ ಅಂಬೇಡ್ಕರ್ ದಲಿತ ಸಂಘ ದಲಿತ ಸಂಘದ ವತಿಯಿಂದ ಒತ್ತಾಯಿಸಿದ್ದಾರೆ…

ವರದಿ. ಬಸವರಾಜ್ ಕಂಪ್ಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
