ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ವಹಿಸಬೇಕೆಂದು ಉಪತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಕೆ…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ದಿನಾಂಕ 18/10/22 ತಾಲ್ಲೂಕಿನ ಮಾಲವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹರೇಗೊಂಡನಹಳ್ಳಿ ಮುಖಂಡರು .ಮಹಿಳೆಯರು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ವಹಿಸಬೇಕೆಂದು ಉಪತಹಸೀಲ್ದಾರರಾದ. ವಿಶ್ವೇಶ್ವರಯ್ಯ. ರವರಿಗೆ ಮನವಿ ಕೊಡುವುದರ ಮುಖಾಂತರ ಪ್ರತಿ ಹಳ್ಳಿಗಳಲ್ಲಿ ಬೀಡಿ ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇದನ್ನು ಸರ್ಕಾರದ ಅಧಿಕಾರಿಗಳು ತಮಗೆ ಕೆಲಸವೇ ಇಲ್ಲ ಎಂಬಂತೆ ಕಂಡು ಕಾಣದೆ .ಕಣ್ಣುಮುಚ್ಚಿ ಕುಳಿತಿರುವ ಹಾಗೆ .ಕಾಣುತ್ತದೆ ಕಾರಣ ಮದ್ಯಪಾನ ಎಗ್ಗಿಲ್ಲದೆ ಸಾಗುತ್ತಿದ್ದು ಮಧ್ಯಮ ಕುಟುಂಬ ವರ್ಗದವರು ಹಾಗೂ ವಿದ್ಯಾರ್ಥಿಗಳು ಈ ಮದ್ಯಪಾನನ್ನೂ ತಮ್ಮ ಹಳ್ಳಿಯ ಯುವಕರು ಮಹಿಳೆಯರು ವೃದ್ಧರು ದುಶ್ಚಟಕ್ಕೆ ಬಲಿಯಾಗುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅದರಿಂದ ಮಾಲ್ವಿ ಗ್ರಾಮದ ಗ್ರಾಮಸ್ಥರು ಹಾಗೂ ಹರೇಗೊಂಡನಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಇದರಿಂದ ಅತಿ ಹೆಚ್ಚು ತೊಂದರೆ ಆಗುತ್ತದೆ ನಮ್ಮ ಗ್ರಾಮಸ್ಥರ ಉದ್ದೇಶ ಈ ಮದ್ಯದ ಅಂಗಡಿ ಮಾಡಲು ಪರವಾನಗಿಯನ್ನು ಕೊಡಬಾರದು ನಮ್ಮ ಗ್ರಾಮಕ್ಕೆ ಬೇಡ ಎಂದು ನಾಲ್ಕಾರು ಸಂಘಟನೆಯವರು ಮುಖಂಡರುಗಳು ಆರೋಪವಾಗಿದೆ ಎಂದು ಹೇಳುತ್ತಾರೆ ಇದು ಹೀಗೆ ಮುಂದುವರೆದರೆ ಮುಂದಿನ ದಿನಮಾನ ಗಳಲ್ಲಿ ಹಳ್ಳಿಯ ಎಲ್ಲಾ ಮಹಿಳೆಯರು ಯುವಕರು ಗಳು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ತಾಲ್ಲೂಕು ಸಂಚಾಲಕರಾದ ಎನ್ ಬಿ ಕೊಟ್ರಮ್ಮ k R s ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ವೀರನಗೌಡ ತಾಲ್ಲೂಕು ಅಧ್ಯಕ್ಷ ಹರಕುಣಿ ಗಣೇಶ್ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ರಾಮಾಂಜನೇಯ ರಾಜಶೇಖರ್ ಹುಲಗಪ್ಪ ಬಸುರಾಜ ಕೃಷ್ಣ ಅಂಜಿನಪ್ಪ ಡಿಎಸ್ ಎಸ್ ಸಂಘಟನೆಯ ಮುಖಂಡರಾದ ಮಂಜುನಾಥ್ ರಮೇಶ್ ಮೈಲಪ್ಪ ವಕೀಲರು ಮಾಲ್ವಿ ಮತ್ತು ಗ್ರಾಮದ ಗ್ರಾಮಸ್ಥರು ಉಪಸ್ಥಿತಿಯಲ್ಲಿ ಇದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend