ಅಕ್ರಮ ಮರಳು ಸಾಗಾಣಿಕೆ ಪೋಲೀಸರ ದಾಳಿ 16 ಟ್ರಾಕ್ಟರ ವಶ ಪ್ರಕರಣ ದಾಖಲು….!!!

ಅಕ್ರಮ ಮರಳು ಸಾಗಾಣಿಕೆ ಪೋಲೀಸರ ದಾಳಿ 16 ಟ್ರಾಕ್ಟರ ವಶ ಪ್ರಕರಣ ದಾಖಲು.

ಸಿಂಧನೂರು.ಸೆ.28 -ರಾಜದನವಿಲ್ಲದೆ ಪೋಲಿಸರ ಕಣ್ಣು ತಪ್ಪಿಸಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಪೋಲೀಸರು ದಾಳಿ ಮಾಡಿ ಸುಮಾರು 16 ಟ್ರಾಕ್ಟರಗಳನ್ನು ವಶಪಡಿಸಿಕೊಂಡು ಠಾಣೆಗೆ ತಂದಿದ್ದು ಇದರಿಂದ ಉಳಿದ ಅಕ್ರಮ ಮರಳು ಸಾಗಾಣಿಕೆದಾರರಲ್ಲಿ ನಡುಕ ಹುಟ್ಟಿಸಿದೆ.

ಗ್ರಾಮೀಣ ಪೊಲೀಸ ಠಾಣೆಯ ಪಿಎಸ್ಐ ಯರಿಯಪ್ಪ ಕರ್ತವ್ಯದಲ್ಲಿ ಇಲ್ಲದ ನೆಪ ಮಾಡಿ ಕೊಂಡ ಅಕ್ರಮ ಮರಳು ದಂಧೆಕೊರರು ರಾಜಧನ ವಿಲ್ಲದೆ ರಾಜಾರೋಷವಾಗಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಬಗ್ಗೆ ಸ್ಥಳೀಯರು ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಜಿಲ್ಲಾ ಪೋಲೀಸ ವರಿಷ್ಠಾದಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಪೋಲೀಸ ವರಿಷ್ಠಾದಿಕಾರಿಗಳ ಆದೇಶದ ಮೆರೆಗೆ ಗ್ರಾಮೀಣ ಪೊಲೀಸ ಠಾಣೆಯ ಪಿಎಸ್ಐ ಯರಿಯಪ್ಪ, ಸಿಬ್ಬಂದಿಗಳಾದ ಶೇಟ್ಟೆಪ್ಪ ರಾಘವೇಂದ್ರ, ಗೋಪಾಲ ಸೇರಿದಂತೆ ಇತರೆ ಸಿಬ್ಬಂದಿಗಳೊಂದಿಗೆ ನಿನ್ನೆ ರಾತ್ರಿ ದಾಳಿ ಮಾಡಿ ಕೆಂಗಲ್ ನದಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಯಲ್ಲಿ ತೊಡಗಿದ್ದ 16 ಟ್ರಾಕ್ಟರಗಳನ್ನು ವಶಪಡಿಸಿ ಕೊಂಡಿದ್ದು ಚಾಲಕರು ಮಾಲೀಕರು ಪರಾರಿಯಾಗಿ ದ್ದಾರೆ ಎಂದು ಹೇಳಲಾಗುತ್ತಿದೆ.

16 ಟ್ರಾಕ್ಟರಗಳನ್ನು ವಶಪಡಿಸಿಕೊಂಡು ಕಲಂ 379 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಚಾಲಕರು ಮತ್ತು ಮಾಲೀಕರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಯರಿಯಪ್ಪ ತಿಳಿಸಿದರು.

ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಯರಿಯಪ್ಪ ರವರು ರಜೆ ಮೇಲೆ ಇದ್ದ ಬಗ್ಗೆ ಮರಳು ಸಾಗಾಣಿಕೆ ಮಾಡಿ ಎಂದು ಠಾಣೆಯ ಕೆಲವು ಪೋಲೀಸರು ಅಕ್ರಮ ಮರಳು ಸಾಗಾಣಿಕೆದಾರರಿಗೆ ಸುಳಿವು ನೀಡಿದ ಕಾರಣ ಮರುದಿನವೇ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅದು ಸತ್ಯನಾ ಸುಳ್ಳಾ ಎನ್ನುವ ಬಗ್ಗೆ ಪಿಎಸ್ಐ ಯರಿಯಪ್ಪ ತನಿಖೆ ಮಾಡಬೇಕಾಗಿದೆ…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend