ನಾಯಿಮರಿಗೆ ಹಾಲುಣಿಸಿ ಹಸಿವು ನೀಗಿಸಿದ ಹಂದಿ ಗುಡೇಕೋಟೆಯಲ್ಲೊಂದು ಅಚ್ಚರಿಯ ದೃಶ್ಯ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಅಂಬೇಡ್ಕರ್ ಕಾಲೋನಿ ಹತ್ತಿರ ಪ್ರತಿನಿತ್ಯ ನಾಯಿಮರಿಗೆ ಹಂದಿ ಸುಮಾರು 2-3- ತಿಂಗಳಗಳಿಂದ ಹಾಲುಣಿಸುತ್ತಿರುವುದನ್ನು ಕಂಡ ಜನತೆಗೆ ಅಚ್ಚರಿ ಮೂಡಿಸಿದೆ.
ಕಾಲ ಬದಲಾದಂತೆ ಇತ್ತೀಚಿನ ದಿನಗಳಲ್ಲಿ ಮನುಷ್ಯರು ಸಹಾನುಭೂತಿ ಮತ್ತು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಎಷ್ಟೋ ಸಂದರ್ಭದಲ್ಲಿ ನೋಡಿದ್ದೇವೆ. ಆದರೆ ಪ್ರಾಣಿಗಳು ಕೆಲವೊಮ್ಮೆ ಮಾನವೀಯವಾಗಿ ವರ್ತಿಸುತ್ತವೆ ಎಂದು ಸಾಬೀತುಪಡಿಸುವ ಘಟನೆಗಳ ಬಗ್ಗೆಯೂ ಕೇಳಿದ್ದೇವೆ. ಇದಕ್ಕೆ ಸಾಕ್ಷಿ ಎಂಬಂತೆ ಅಂತಹದ್ದೇ ಇಲ್ಲೊಂದು ಹಂದಿ ನಾಯಿ ಮರಿಗೆ ಹಾಲುಣಿಸಿ ಹಸಿವು ನೀಗಿಸಿದ ಘಟನೆ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಗುಡೇಕೋಟೆ ಗ್ರಾಮದಲ್ಲಿ ನಡೆದಿರುವ ಇಂತಹದೊಂದು ಘಟನೆ ನಡೆದಿದೆ. ಈ ಗ್ರಾಮದ ತಿಪ್ಪಕ್ಕ ಎಂಬುವರು ಸಾಕಿದ ನಾಯಿ ಮರಿ ಇತ್ತೀಚೆಗೆ ಮನೆ ಹತ್ತಿರವಿರುವ ಚರಂಡಿಗೆ ಆಹಾರ ಹರಿಸಿ ಬರುವ ಹಂದಿ ಮನೆ ಹತ್ತಿರವಿರುವ ನಾಯಿಮರಿಗೆ ಹಾಲುಣಿಸಿತ್ತದೆ.ಈ ಹಂದಿಯೇ ಈಗ ಎಲ್ಲರ ಆಕರ್ಷಣೆಯಾಗಿದೆ.
ಹೌದು ಮನೆಯಲ್ಲೆ ಸಾಕಿದ
ನಾಯಿಯೊಂದು ತಾಯಿಲ್ಲದೇ ಒಂಟಿಯಾಗಿತ್ತು. ಹಾಲುಣಿಸಲು ಸಾಧ್ಯವಾಗುತ್ತಿರಲಿಲ್ಲ.ಹೀಗಾಗಿ ನಾಯಿಮರಿಗೆ ಹಸಿವಿನಿಂದ ಬಳಲುವ ಸಂದರ್ಭ ಎದುರಾಗುತ್ತಿತ್ತು. ಈ ವೇಳೆ ಅಲ್ಲಿಗೆ ಮೇವು ಹರಸಿ ಬರುತ್ತಿದ್ದ ಊರ ಹಂದಿ ಸ್ವಯಂ ಪ್ರೇರಿತವಾಗಿ ನಾಯಿಮರಿ ಬಳಿ ಹೋಗಿ ಹಾಲು ಕುಡಿಸುತ್ತಿತ್ತು.ನಾಯಿಮರಿ ಇದಕ್ಕೆ ಒಗ್ಗಿಕೊಂಡು ಹಸಿವಾದಾಗಲೆಲ್ಲ ಹಂದಿಯನ್ನು ಹಿಂಬಾಲಿಸತೊಡಗುತ್ತಿದೆ.ಹಂದಿಯೂ ಸಹ ಅಷ್ಟೇ ಅವುಗಳಿಗೆ ಸಹಕಾರಿಯಾಗಿದೆ ಮತ್ತು ದಿನಕ್ಕೆ ಎರಡು ಬಾರಿ ನಾಯಿ ಮರಿಗೆ ಹಾಲುಣಿಸುತ್ತಿದೆ.
ಹಂದಿ ಮತ್ತು ನಾಯಿ ಮರಿಗೆ ಈ ರೀತಿ ಪೋಷಣೆ ನೀಡುವುದನ್ನು ನಾವು ಹಿಂದೆಂದೂ ನೋಡಿಲ್ಲ. ಇವರಿಬ್ಬರ ಬಾಂಧವ್ಯ ಈಗ ತಾಯಿ–ಮಕ್ಕಳಂತಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
*ನಾಯಿಮರಿಗೆ ಹಾಲುಣಿಸಿ ಹಸಿವು ನೀಗಿಸಿದ ಹಂದಿ ಗುಡೇಕೋಟೆಯಲ್ಲೊಂದು ಅಚ್ಚರಿಯ ದೃಶ್ಯ*
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಅಂಬೇಡ್ಕರ್ ಕಾಲೋನಿ ಹತ್ತಿರ ಪ್ರತಿನಿತ್ಯ ನಾಯಿಮರಿಗೆ ಹಂದಿ ಸುಮಾರು 2-3- ತಿಂಗಳಗಳಿಂದ ಹಾಲುಣಿಸುತ್ತಿರುವುದನ್ನು ಕಂಡ ಜನತೆಗೆ ಅಚ್ಚರಿ ಮೂಡಿಸಿದೆ.
ಕಾಲ ಬದಲಾದಂತೆ ಇತ್ತೀಚಿನ ದಿನಗಳಲ್ಲಿ ಮನುಷ್ಯರು ಸಹಾನುಭೂತಿ ಮತ್ತು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಎಷ್ಟೋ ಸಂದರ್ಭದಲ್ಲಿ ನೋಡಿದ್ದೇವೆ. ಆದರೆ ಪ್ರಾಣಿಗಳು ಕೆಲವೊಮ್ಮೆ ಮಾನವೀಯವಾಗಿ ವರ್ತಿಸುತ್ತವೆ ಎಂದು ಸಾಬೀತುಪಡಿಸುವ ಘಟನೆಗಳ ಬಗ್ಗೆಯೂ ಕೇಳಿದ್ದೇವೆ. ಇದಕ್ಕೆ ಸಾಕ್ಷಿ ಎಂಬಂತೆ ಅಂತಹದ್ದೇ ಇಲ್ಲೊಂದು ಹಂದಿ ನಾಯಿ ಮರಿಗೆ ಹಾಲುಣಿಸಿ ಹಸಿವು ನೀಗಿಸಿದ ಘಟನೆ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಗುಡೇಕೋಟೆ ಗ್ರಾಮದಲ್ಲಿ ನಡೆದಿರುವ ಇಂತಹದೊಂದು ಘಟನೆ ನಡೆದಿದೆ. ಈ ಗ್ರಾಮದ ತಿಪ್ಪಕ್ಕ ಎಂಬುವರು ಸಾಕಿದ ನಾಯಿ ಮರಿ ಇತ್ತೀಚೆಗೆ ಮನೆ ಹತ್ತಿರವಿರುವ ಚರಂಡಿಗೆ ಆಹಾರ ಹರಿಸಿ ಬರುವ ಹಂದಿ ಮನೆ ಹತ್ತಿರವಿರುವ ನಾಯಿಮರಿಗೆ ಹಾಲುಣಿಸಿತ್ತದೆ.ಈ ಹಂದಿಯೇ ಈಗ ಎಲ್ಲರ ಆಕರ್ಷಣೆಯಾಗಿದೆ.
ಹೌದು ಮನೆಯಲ್ಲೆ ಸಾಕಿದ
ನಾಯಿಯೊಂದು ತಾಯಿಲ್ಲದೇ ಒಂಟಿಯಾಗಿತ್ತು. ಹಾಲುಣಿಸಲು ಸಾಧ್ಯವಾಗುತ್ತಿರಲಿಲ್ಲ.ಹೀಗಾಗಿ ನಾಯಿಮರಿಗೆ ಹಸಿವಿನಿಂದ ಬಳಲುವ ಸಂದರ್ಭ ಎದುರಾಗುತ್ತಿತ್ತು. ಈ ವೇಳೆ ಅಲ್ಲಿಗೆ ಮೇವು ಹರಸಿ ಬರುತ್ತಿದ್ದ ಊರ ಹಂದಿ ಸ್ವಯಂ ಪ್ರೇರಿತವಾಗಿ ನಾಯಿಮರಿ ಬಳಿ ಹೋಗಿ ಹಾಲು ಕುಡಿಸುತ್ತಿತ್ತು.ನಾಯಿಮರಿ ಇದಕ್ಕೆ ಒಗ್ಗಿಕೊಂಡು ಹಸಿವಾದಾಗಲೆಲ್ಲ ಹಂದಿಯನ್ನು ಹಿಂಬಾಲಿಸತೊಡಗುತ್ತಿದೆ.ಹಂದಿಯೂ ಸಹ ಅಷ್ಟೇ ಅವುಗಳಿಗೆ ಸಹಕಾರಿಯಾಗಿದೆ ಮತ್ತು ದಿನಕ್ಕೆ ಎರಡು ಬಾರಿ ನಾಯಿ ಮರಿಗೆ ಹಾಲುಣಿಸುತ್ತಿದೆ.
ಹಂದಿ ಮತ್ತು ನಾಯಿ ಮರಿಗೆ ಈ ರೀತಿ ಪೋಷಣೆ ನೀಡುವುದನ್ನು ನಾವು ಹಿಂದೆಂದೂ ನೋಡಿಲ್ಲ. ಇವರಿಬ್ಬರ ಬಾಂಧವ್ಯ ಈಗ ತಾಯಿ–ಮಕ್ಕಳಂತಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ ಡಿಎಂ ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
