ರಾಜ್ಯಾದ್ಯಂತ ಜವಾಬ್ದಾರಿ ನನ್ನ ಮೇಲಿದೆ ದಿನಾ ಬೇಳಕಾದರೆ ಊರು ಊರು ಭೇಟಿ ಮತ್ತು ಎಲ್ಲಾ ಸಾರ್ವಜನಿಕರ ಅಭ್ಯರ್ಥಿಗಳೊಂದಿಗೆ ಮಾತುಕತೆ ಜನಸೇವೆಯಲ್ಲಿ ದಿನಾ ಪ್ರಾಮಾಣಿಕ ಪ್ರಯತ್ನಗಳು ಜನಸೇವಾ ಜನ ಸ್ನೇಹಿ ಕಾರ್ಯಗಳ ಪ್ರಣಾಳಿಕೆ ಸಿದ್ಧತೆ ಅದೇ ಪ್ರಣಾಳಿಕೆ ನಮ್ಮ ಮುಂದಿನ ಮುಖ್ಯ ಉದ್ದೇಶಗಳು.
ನಾವು ರಾಜಕೀಯ ಮಾಡುತ್ತಿಲ್ಲ ಜನಸೇವೆ ಮಾಡುವ ಪ್ರಯತ್ನ ಅದಕ್ಕೆ ಬೇಕು ಅಧಿಕಾರ ದಯವಿಟ್ಟು ಕೈ ಮುಗಿದು ಹೇಳುವೆ ನಮ್ಮ ಸಿಂಧನೂರಿನ ಮಹಾ ಜನತೆ ತಮ್ಮ ಸಾರ್ಥಕ ಬದುಕು ಮೂಲಭೂತ ಸೌಕರ್ಯಗಳ ಬದುಕುವದು ನಿಮ್ಮ ಹಕ್ಕು, ಇತಿಹಾಸ ಬದಲಿಸಲು ಸಿದ್ಧತೆಗೆ ತಯ್ಯಾರಾಗಿ ನಮ್ಮೊಂದಿಗೆ ಕೈ ಜೋಡಿಸಿ ನಿಮ್ಮ ಹಕ್ಕು ನಿಮ್ಮ ಕೈಯಲ್ಲಿದೆ
ಸಹಕರಿಸಿ| ಬೆಂಬಲಿಸಿ | ಕೈ ಜೋಡಿಸಿ
ವಂದನೆಗಳು. ಸಿಂಧನೂರು : ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಎನ್. ಸಿ. ಪಿ. ಹರೀಶ ರವರು ತಾಲೂಕಿನಾದ್ಯಂತ ಸಂಚರಿಸಿ ಗ್ರಾಮಗಳಲ್ಲಿನ ಅನೇಕ ಬಗೆಯ ವಿವಿಧ ಧರ್ಮಗಳ ದೇವಸ್ಥಾನಗಳಿಗೆ, ಮಠಮಾನ್ಯಗಳಿಗೆ, ದೇಣಿಗೆಯನ್ನು ನೀಡುತ್ತಾ, ಎಲ್ಲಾ ಸಮಾಜದ ಮುಖಂಡರ ಜೊತೆಗೂಡಿ ವಿವಿಧ ಸರ್ಕಲ್ ಗಳಿಗೆ ಕನಕ, ವಾಲ್ಮೀಕಿ, ಅಂಬೇಡ್ಕರ್ ಇನ್ನೂ ಅನೇಕ ಮೂರ್ತಿಗಳನ್ನು ಕೊಡಿಸುವದರ ಮೂಲಕ ಜನಸೇವೆ ಮಾಡಿಕೊಂಡು ಬಂದಿದ್ದಾರೆ. ಸಾಮೂಹಿಕ ವಿವಾಹ, ಜಾತ್ರೆ, ಇನ್ನಿತರ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಜನಪ್ರಿಯತೆ ಗಳಿಸಿಕೊಂಡು ಬಂದಿದ್ದಾರೆ.
ಇದನ್ನು ಸಹಿಸದ ಕೆಲವು ಕಾಣದ ಕೈಗಳು ತಪ್ಪು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಮಾಹಿತಿ ಮತ್ತು ಸತ್ಯ ತಿಳಿಯಲು ಕೆಲವು ಗ್ರಾಮಗಳಿಗೆ ಬೇಟಿ ನೀಡಿ ಜನಸಾಮಾನ್ಯರೆ ಉತ್ತರ ನೀಡುತ್ತಾರೆ. ನಮ್ಮ ರಾಜ್ಯಧ್ಯಕ್ಷರು ಎಲ್ಲಿಗೆ ಹೋಗಿಲ್ಲ ನಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ.
ಕೆಲವು ತಾಂತ್ರಿಕ ದೋಷದಿಂದ ಹರೀಶ ರವರ ಬದಲಾಗಿ ಬೇರೆ ನಾಯಕರ ಪೋಟೊ ಬಂದಿದೆ. ನಮ್ಮಗಳ ತಪ್ಪಿನಿಂದ ನಾವೇ ವಿಷಾದನೀಯ ವ್ಯಕ್ತಪಡಿಸುತ್ತೇವೆ. ಇದರಲ್ಲಿ ಒಂದು ಕೆಲವು ತಪ್ಪುಗಳಿದ್ದರು ನಾವೇ ವಿಷಾದನೀಯ ಸೂಚನೆಯನ್ನು ಕೇಳುತ್ತೇವೆ.ನಮಗೆ ಏನೇ ತೊಂದರೆಯಾದರೂ ಅವರು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ.ನಿಮಗೆ ಕೆಲವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕೇಲವು ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ಪತ್ರಿಕೆಗೆ ವ್ಯಕ್ತಪಡಿಸಿದರು…

ವರದಿ. ಮಂಜುನಾಥ್, ಎನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
