ರಾಯಬಾಗ ಮಹಾತ್ಮರಾದ ವಿ.ಎಲ್. ಪಾಟೀಲ ಅವರ ಹೆಸರು ಬಳಸಿ ಆರೋಗ್ಯ ಹಾನಿಕಾರಕ ಮಾವಾ ಮಾರಾಟ ಮಾಡುತ್ತಿರುವ ಇಲ್ಲೊಬ್ಬ ಭೂಪ.

ರಾಯಬಾಗ ಅಂದರೆ ಸಾಕು ಅಲ್ಲಿ ಏನೊ ಒಂದು ರೋಮಾಂಚನಕಾರಿ ಇತಿಹಾಸ ಇರುವ ಪಟ್ಟಣವಾಗಿದೆ ಆದರೆ ಇಲ್ಲಿ ಆದುನಿಕ ದೇವಮಾನವ ಬಡವರ ಆಶಾ ಕಿರಣ ದಿವಾಂಗತ ವಿ.ಎಲ್.ಪಾಟೀಲರ ಹೆಸರು ಚಿರಕಾಲ ಜನರ ಮನಸ್ಸಲ್ಲಿ ಅಜರಾಮರವಾಗಿರುವ ಹೆಸರನ್ನು ಇಲ್ಲೊಬ್ಬ ವ್ಯಕ್ತಿ ತನ್ನ ವೈಯಕ್ತಿಕ ಲಾಭಕ್ಕಾಗಿ ಜಿಲ್ಲಾ ಪಂಚಾಯತ ಕಚೇರಿ ಪಕ್ಕದಲ್ಲೇ ಪಾನಶಾಪ ಅಂಗಡಿಗೆ ಹೆಸರು ಇಟ್ಟಿದ್ದಾನೆ ಅದು ಅಭಿಮಾನ ಅನ್ನಬಹುದು ಆದರೆ ಈ ಅವಿವೇಕಿ ಮಾಡುತ್ತಿರುವುದು ಮಾತ್ರ ದುಷ್ಟಟಗಳಲ್ಲಿ ಒಂದಾದ ಮಾವಾ ಅನ್ನುವ ಅವೈಜ್ಞಾನಿಕ ಗುಟಕಾ ಪದಾರ್ಥ ಮಾರಾಟ ಮಾಡುತ್ತಿದ್ದಾನೆ ಇವನಿಗೆ ಶ್ರೀ ರಕ್ಷಣೆ ಅಂದರೆ ತನ್ನ ಅಂಗಡಿಗೆ ಹೆಸರು ಶ್ರೀ ವಿ.ಎಲ್.ಪಾಟೀಲ ಅವರ ಕುಟುಂಬದ ಹೆಸರುಗಳನ್ನು ಬಳಸಿ ಜನರನ್ನು ಬಾಲಕರನ್ನು ದುಷ್ಟಗಳ ದಾಸರನ್ನಾಗಿ ಮಾಡುತ್ತಿದ್ದಾನೆ ಈ ವಿಷಯ ಪಾಟೀಲ ಅವರ ಕುಟುಂಬದವರಿಗೆ ಗೊತ್ತಿದಿಯೊ ಇಲ್ಲವೊ. ಮತ್ತು ರಾಯಬಾಗ ತಾಲ್ಲೂಕಾ ಕೇಂದ್ರ ಪಟ್ಟಣದ ಮದ್ಯ ಭಾಗದ ಸಿಂಡಿಕೇಟ್ ಬ್ಯಾಂಕ್ ಎದುರು ಇರುವ ಮಳ್ಳಿಗೆಗಳಲ್ಲಿ ಈ ಅಕ್ರಮ ಮಾವಾ ಮಾರಾಟವಾಗುತ್ತಿರುವುದು ಸಂಭಂದಿಸಿದ ಇಲಾಖೆಗಳ ಗಮನಕ್ಕು ಇದೆಯೊ ಇಲ್ಲವೊ ಎಂದು ಹತ್ತು ಹಲವಾರು ಪ್ರಶ್ನೆಗಳು ಪ್ರಜ್ಞಾವಂತರಲ್ಲಿ ಮೂಡುತ್ತಿವೆ ಇನ್ನಾದರು ಇವನ ಮೇಲೆ ಕಾನೂನು ಕ್ರಮ ಕೈಗೊಂಡು ಈ ಮಾವಾ ದಂಧೆ ಬಂದ್ ಮಾಡುತ್ತಾರಾ ಎಂದು ಕಾದುನೋಡಬೇಕಿದೆ…

ವರದಿ.ಶಿವಶಂಕರ್, ಬಾಗಲಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
