ಕರುಣಾಕರ ರೆಡ್ಡಿಯವರನ್ನ ಹರಪನಹಳ್ಳಿಯ ಜನ ಕಲೆಕ್ಷನ್ ಶಾಸಕ ಎಂದು ಕರೆಯತ್ತಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್ ಹೇಳಿಕೆ…!!!

ಹರಪನಹಳ್ಳಿ ತಾಲೂಕ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್ .ಅವರು ಪತ್ರಿಕೆ ಹೇಳಿಕೆ ಕರುಣಾಕರ ರೆಡ್ಡಿಯವರನ್ನ ಹರಪನಹಳ್ಳಿಯ ಜನ ಕಲೆಕ್ಷನ್ ಶಾಸಕ ಎಂದು ಕರೆಯತ್ತಿದ್ದಾರೆ.

ಹರಪನಹಳ್ಳಿ: ಕರುಣಾಕರರೆಡ್ಡಿಯವರಿಗೆ ರಾಜ್ಯದ ಜನರ ಮೇಲೆ ದಿಢೀರ್ ಪ್ರೀತಿ ಬಂದಿದೆ, ಕಾಂಗ್ರೆಸ್ ನವರು ಕಲಾಪವನ್ನ ಅನಗತ್ಯವಾಗಿ ವ್ಯರ್ಥಮಾಡಿ ದ್ದಾರೆ ಎಂದು ಆರೋಪಿಸಿರುವ ಶಾಸಕರೇ, ಆಯ್ಕೆಯಾಗಿ ನಾಲ್ಕು ವರ್ಷ ಕಳೆದರೂ ಅಡ್ರಸ್ಸೇ ಇಲ್ಲದ ತಾವು ದಿಢೀರ್ ಆಗಿ ಈಗ ಪ್ರತ್ಯಕ್ಷವಾಗಿ ಕಾಂಗ್ರೆಸ್ ಪಕ್ಷವನ್ನೇ ಟೀಕೆ ಮಾಡುತ್ತಲಿದ್ದೀರಿ..

ಕರೋನಾ ಸಂದರ್ಭದಲ್ಲಿ ತಾಲೂಕಿನ ಜನ ತತ್ತರಿಸುವಾಗ ತಾವು ಎಲ್ಲಿ ಹೋಗಿದ್ದಿರಿ

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ರೀತಿ ತಾವು, ಕರೋನಾ ತಹಬಂದಿಗೆ ಬಂದಾಗ ಕಾಟಾಚಾರಕ್ಕೆ ತಾಲೂಕು ಪ್ರವಾಸ ಕೈಗೊಂಡು ಫುಡ್ ವಿತರಿಸಿದ್ದು ಹಾಸ್ಯಾಸ್ಪದವಾಗಿತ್ತು..

ಕೋವಿಡ್ ನೆಪ ಹೇಳಿ ಆಗಸ್ಟ್15 ಜನವರಿ26 ರ ರಾಷ್ಟ್ರೀಯ ಹಬ್ಬಕ್ಕೆ ಬಾರದ ನೀವು ರಾಜ್ಯ ದೇಶದ ಬಗ್ಗೆ ಮಾತನಾಡುತ್ತೀರಿ..

ಹರಪನಹಳ್ಳಿ ಜನಕ್ಕೆ ಬಿಡಿ,ನಿಮ್ಮ ಕಾರ್ಯಕರ್ತರಿಗೇ ಕೈ ಸಿಗದ ನೀವು, ಬ್ರಿಟಿಷ್ ರ ರೀತಿ ಗವರ್ನರ್ ಜನರಲ್ ಗಳನ್ನ ಇಟ್ಟು ಆಡಳಿತ ನಡೆಸುತ್ತಿದ್ದೀರಿ, ತಿಂಗಳಿಗೊಮ್ಮೆ ಹರಪನಹಳ್ಳಿಗೆ ಬರುವ ನಿಮ್ಮನ್ನ ನಿಮ್ಮ ಪಕ್ಷದವರೇ ಕಲೆಕ್ಷನ್ ಶಾಸಕ ಎಂದು ಕರೆಯುತ್ತಿದ್ದಾರೆ, ನಿಮ್ಮ ಬಾಯಲ್ಲಿ ಕಾಂಗ್ರೆಸ್ ಟೀಕೆ, ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆದೀತು..

ಹಿಜಬ್ ವಿವಾದ ಬಿಜೆಪಿ ಯೇ ಸೃಷ್ಟಿ ಮಾಡಿದ್ದು ಅಂತ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹೇಳಿದ ವೀಡಿಯೋ ಕ್ಲಿಪ್ಪಿಂಗ್ಸ್ ಕೇಳಿಸಿಕೊಳ್ಳಿ, ಇಲ್ಲದಿದ್ದರೆ ನಾವೇ ನಿಮ್ಮ ವಾಟ್ಸಪ್ ಗೆ ಸೆಂಡ್ ಮಾಡುತ್ತೇವೆ..

ಹರ್ಷನ ಸಾವಿನಲ್ಲೂ ರಾಜಕೀಯ ಮಾಡುವ ಬಿಜೆಪಿ ನೈತಿಕವಾಗಿ ದಿವಾಳಿಯಾಗಿದ್ದು, ಹರಪನಹಳ್ಳಿಯ ಜನರಿಂದ ಆಯ್ಕೆಯಾದ ನೀವು ಕ್ಷೇತ್ರಕ್ಕೆ ಅನ್ಯಾಯ ಆಗದ ರೀತಿ ಕಾರ್ಯ ನಿರ್ವಹಿಸಿ..

ಹರಪನಹಳ್ಳಿ ಕ್ಷೇತ್ರದ ಕಳಪೆ ಕಾಮಗಾರಿಯಿಂದ ರಸ್ತೆಗಳು ಹಾಳಾಗಿದ್ದಾವೆ..
ರೈತರಿಗೆ ರಾಗಿ ಖರೀದಿ ಕೇಂದ್ರ ಇನ್ನೂ ಪ್ರಾರಂಭ ಆಗಿರುವುದಿಲ್ಲ,ನಿಮ್ಮ ಜವಾಬ್ದಾರಿ ನಿರ್ವಹಿಸಿ ಸುಮ್ಮನೆ ಟೀಕೆ ಮಾಡೋ ಚಾಳಿ ಬಿಡಿ ಎಂದು ಬಸವರಾಜ್ ಕರುಣಾಕರ ರೆಡ್ಡಿ ನಡವಳಿಕೆ ಖಂಡಿಸಿದ್ದಾರೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend