ಕುಡುಚಿ-ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಕಂಟಕವಾಗುತ್ತಿರು ಇಟ್ಟಿಗೆ ಬಟ್ಟಿಗಳ ಧೂಳು.
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಇಟ್ಟಿಗೆ ಬಟ್ಟಿಗಳ ಹಾವಳಿಯಾಗಿದ್ದು ಇದರಿಂದ ವಾಹನ ಸವಾರರಿಗಂತು ಕಂಟಕವಾಗಿ ಪರಿಣಮಿಸಿವೆ ಕಾರಣ ತಾಲ್ಲೂಕಿನ ಚಿಮ್ಮಡ ಮಹಾಲಿಂಗಪೂ ರಸ್ತೆ,
ಬನಹಟ್ಟಿ ರಬಕವಿ ರಸ್ತೆ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯು ಇದಾಗಿದ್ದು ದಿನ ನಿತ್ಯದ ಸಾವಿರಾರು ವಾಹಗಳು ಸಂಚರಿಸುತ್ತವೆ ಮತ್ತು ಶಾಲಾ ಮಕ್ಕಳು ಸಹ ಇದೆ ಮಾರ್ಗದಲ್ಲಿ ಸಂಚರಿಸುತ್ತಾರೆ ಆದರೆ ಇದಕ್ಕೆಲ್ಲ ರಸ್ತೆ ಪಕ್ಕದಲ್ಲಿ ನಡೆಯುತ್ತಿರುವ ಇಟ್ಟಿಗೆ ಬಟ್ಟಿಗಳಿಂದ ಬರುವ ಧೂಳು(ಬೂದಿ) ಕಣ್ಣಿಗೆ ಬಿದ್ದು ಸಾಕಷ್ಟು ಅಪಘಾತಗಳು ನಡೆದ ಉದಾಹರಣೆಗಳನ್ನು ಸ್ಥಳೀಯರು ಕೂಡ ಹೇಳುತ್ತಾರೆ ಆದರು ಇವುಗಳನ್ನು ಬಂದ್ ಮಾಡಲು ಯಾವ ಇಲಾಖೆಯು ಮುಂದೆ ಬರದೆ ಇರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ ಇದರಲ್ಲಿ ಗಮನಿಸಬೇಕಾದರೆ ಇದು ಕೂಡ ರಬಕವಿ ಬನಹಟ್ಟಿ ತಾಲೂಕಾಡಳಿತದ ಅನತೆ ದೂರದಲ್ಲಿರುವುದು ಗಮನಾರ್ಹ ಇನ್ನಾದರು ಸಂಭಂಧಿಸಿದ ಇಲಾಖೆಗಳು ಬಂದು ಇವುಗಳನ್ನು ಬಂದ್ ಮಾಡಿ ತೆರವು ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.

ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
