ಘಟಪ್ರಭಾ ನದಿಯ ಮರಳಿಗೆ ಕೈ ಹಾಕಿದ ಕಿಡಗೇಡಿಗಳು
ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ನಾಗರಾಳ ಗ್ರಾಮ ಹತ್ತಿರದ ಘಟಪ್ರಭಾ ನದಿ ನಾಲ್ಕು ದಿನಗಳ ಹಿಂದೆ ಕಮ್ಮಿ ಆಗಿದ್ದು ಇದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಮೂಕ ಎತ್ತಿನ ಗಾಡಿ (ಚಕ್ಕಡಿ ಬಂಡಿ) ಬಳಸಿ ರಾತ್ರಿ ವೇಳೆ ಅಕ್ರಮವಾಗಿ ಮರಳು ಎತ್ತುತ್ತಿದ್ದಾರೆ .ಸರ್ಕಾರ ಕೆಲ ವರ್ಷಗಳಿಂದ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುವುದನ್ನು ನಿಷೇಧ ಮಾಡಿದೆ ಮರಳಿಗಾಗಿ ಸರ್ಕಾರ ನಿಗದಿ ಮಾಡಿರುವ ಘಟಕಗಳಿಂದ ಮಾತ್ರ ಶುಲ್ಕ ತುಂಬಿ ಮರಳು ಪಡೆಯುವ ನಿಯಮವಿದ್ದರು ಸಹ ನದಿ ಪಾತ್ರದ ಕೆಲವು ಕಿಡಗೇಡಿಗಳು ಇಲಾಖೆಗಳ ಕಣ್ಣು ತಪ್ಪಿಸಿ ಘಟಪ್ರಭಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವು ಮುಧೋಳ ತಾಲ್ಲೂಕಿನ ನಾಗರಾಳದಲ್ಲಿ ಕಂಡು ಬಂದ ದೃಶ್ಯ ಇನ್ನಾದರು ಇದರ ಮೇಲೆ ಸಂಭಂಧಿಸಿದ ಇಲಾಖೆಗಳು ಹದ್ದಿನ ಕಣ್ಣಿಟ್ಟು ಮರಳನ್ನು ಕಾಯ್ದು ಅಕ್ರಮಕೋರರ ಮೇಲೆ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ .

ವರದಿ.
ಶಿವಶಂಕರ ಕಡಬಲ್ಲವರ
ಮುಧೋಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
