ಕೋವಿಡ್-19 ಮೂರನೇ ಅಲೆ ಭೀತಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ; ಎನ್.ಟಿ.ಕೋಡಿ ಭೀಮರಾಯ.!!
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣದಲ್ಲಿ ಇಂದು ಕೋವಿಡ್ ಮೂರನೇ ಅಲೆ ಎದುರಾಗುವ ಭೀತಿ ಯಿದ್ದು, ಲಸಿಕೆಯನ್ನು ಪಡೆಯದೆ ಇರುವುದಕ್ಕಿಂತಲು ಯಾವುದಾದರೂ ಲಸಿಕೆ ಪಡೆಯುವುದು ಅತ್ಯುತ್ತಮ ಎಂದು ನಾಯಕಹಟ್ಟಿ ಪ.ಪಂ. ಮುಖ್ಯಾಧಿಕಾರಿ ಎನ್.ಟಿ.ಕೋಡಿ ಭೀಮರಾಯ ಅಭಿಪ್ರಾಯಪಟ್ಟರು. ನಾಯಕನಹಟ್ಟಿ ಪಟ್ಟಣದ 12ನೇ ವಾರ್ಡ್ನಲ್ಲಿ ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ನೀಡಿ ನಂತರ ಮಾತನಾಡಿದ ನಿಮ್ಮ ಪ್ರಾಣಕ್ಕೆ ಹಾನಿಯಾಗುವುದಿಲ್ಲ ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆದ್ದರಿಂದ ತಾವು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ನಂತರ ಯಾವುದೇ ಉದಾಸೀನ ಮಾಡದೇ ಕೊರೋನ ಮಾರ್ಗ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಕೋವಿಡ್ ಮಹಾಮಾಡಿ ಹಾವಳಿಯಿಂದ ನಿರಂತರವಾಗಿದ್ದು, ವಿಶ್ವವೇ ತತ್ತರಿಸಿದೆ. ಪ್ರತಿಯೊಬ್ಬರು ಎಚ್ಚತ್ತಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಸ್ಥಿತರಾದ ಪ.ಪಂ ಅಧಿಕಾರಿಗಳು, ಆಶಾಕಾರ್ಯಕರ್ತರು, ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಇದ್ದರು….

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
