ಚಿತ್ರದುರ್ಗ.25 ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ಏರ್ಪಡಿಸಿರುವ “ವಚನ ಕಾರ್ತಿಕ ” ದ ಎರಡನೆಯ ದಿನ( 24-10-2025)ಶ್ರೀಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕರ್ತೃವಿನ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳವರ ಸಾನಿಧ್ಯದಲ್ಲಿ, ಶ್ರೀಮಠದ ಬಸವ ಮುರುಘೇಂದ್ರ ಶ್ರೀಗಳವರ ಸಮ್ಮುಖದಲ್ಲಿ ಶಿವಶರಣರಾದ ಘಟ್ಟಿವಾಳಯ್ಯ ಹಾಗೂ ಹೆಂಡದ ಮಾರಯ್ಯ ಅವರ ಬಗ್ಗೆ ಮುಖ್ಯ.ಶಿಕ್ಷಕಿ ಶ್ರೀಮತಿ ಡಾ. ಲೋಲಾಕ್ಷಮ್ಮ ಹಾಗೂ ಚುಟುಕು ಸಾಹಿತಿ ಆರ್.ಜಿ ವಿನಾಯಕ ಅವರುಗಳು ಮಾತನಾಡಿದರು. ನರ್ಸಿಂಗ್ ಸೈನ್ಸ್ ಪರಿವೀಕ್ಷಕರಾದ ಶ್ರೀಭಗವಾನ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರುಗಳು, ಸಾರ್ವಜನಿಕರು ಎಸ್.ಜೆ.ಎಂ.ವಿದ್ಯಾಪೀಠದ ಶಾಲಾ ಕಾಲೇಜುಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
