ಲೋಕೇಶ್ ನಾಯಕ ಫೌಂಡೇಶನ್ ವತಿಯಿಂದ ಉಚಿತವಾಗಿ ನೋಟ್ ಬುಕ್ ವಿತರಣೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ನಾಲ್ಕನೇ ವಾರ್ಡ್ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆ ಶಾಲೆಯ ಎಲ್ಲಾ ಮಕ್ಕಳಿಗೆ ಕೆಪಿಸಿಸಿ ಸದಸ್ಯರಾದ ಲೋಕೇಶ್ ನಾಯಕ ಫೌಂಡೇಶನ್ ಆಶ್ರಯದಲ್ಲಿ ನವ ಯುವಕರ ಗೆಳೆಯರ ಬಳಗದಿಂದ ರಾಮನಗರ ಇವರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ನವ ಯುವಕರ ಗೆಳೆಯರ ಬಳಗದಿಂದ ಶಾಲೆಯ ವಿದ್ಯಾರ್ಥಿಗಳಿಗೆ ನಿಮ್ಮ ತಂದೆ ತಾಯಿಗಳು ಕಷ್ಟಪಟ್ಟು ದುಡಿದು ನಿಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಕಳಿಸುತ್ತಿದ್ದಾರೆ ತಂದೆ ತಾಯಿಗೆ ವ್ಯರ್ಥವಾಗದಂತೆ ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಮಟ್ಟಕ್ಕೆ ಓದಿ ಉನ್ನತ ಸ್ಥಾನವನ್ನು ಪಡೆದುಕೊಂಡು ನಿಮ್ಮ ತಂದೆ ತಾಯಿಯಂದಿರ ಋಣವನ್ನು ತೀರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ. ಗಂಗಮ್ಮ ಯುವಕರಗಳಾದ ಮಹೇಶ್.
ಶ್ರೀನಿವಾಸ್. ಕೊಟ್ಲೇಶ್. ಮೂಗಣ್ಣ ಹೊನ್ನೂರ್ ಸ್ವಾಮಿ . ವೀರೇಶ್. ಈಶ್ವರಪ್ಪ. ಫಕ್ರು ಸ್ವಾಮಿ.ಮಂಜುನಾಥ್. ಕಲ್ಲೇಶ್. ರಾಮಾಂಜನಿ ತಿಪ್ಪೇಸ್ವಾಮಿ. ಕೊಟ್ರೇಶ. ಅಂಜಿನಪ್ಪ. ಮಾರುತಿ. ಹಾಗೂ ಆ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪೋಷಕರು ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
