ಚಳ್ಳಕೆರೆ ತಾಲೂಕು ಯಾದವ (ಗೊಲ್ಲರ) ಸಂಘ.ಚಳ್ಳಕೆರೆ.
ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ
ದಿನಾಂಕ:08/10/2022-ಶನಿವಾರ
ಸಮಯ ಬೆಳಿಗ್ಗೆ 10.00 ಗಂಟೆಗೆ
ಸ್ಥಳ,:- ಶ್ರೀ ಕೃಷ್ಣ ವಿದ್ಯಾರ್ಥಿ ನಿಲಯ ತ್ಯಾಗರಾಜ ನಗರ, ಚಳ್ಳಕೆರೆ
ಶನಿವಾರ ದಂದು ಬೆಳಿಗ್ಗೆ 10.00 ಗಂಟೆಗೆ ಚಳ್ಳಕೆರೆ ನಗರದ ಶ್ರೀ ಕೃಷ್ಣ ವಿದ್ಯಾರ್ಥಿ ನಿಲಯದಲ್ಲಿ ತಾಲ್ಲೂಕು ಗೊಲ್ಲ ನೌಕರರ ಸಂಘದ ವತಿಯಿಂದ ನಮ್ಮ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ಕಾರ್ಯಕ್ರಮಕ್ಕೆ ಸನ್ಮಾನ್ಯ ಶ್ರೀ ಟಿ.ರಘುಮೂರ್ತಿ, ಮಾನ್ಯ ಶಾಸಕರು ಚಳ್ಳಕೆರೆ, ಸನ್ಮಾನ್ಯ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ,ಶಾಸಕರು ಹಿರಿಯೂರು, ಹಾಗೂ ಶ್ರೀ ನಾಗರಾಜ ಯಾದವ್, ವಿಧಾನಪರಿಷತ್ ಸದಸ್ಯರು,ಬೆಂಗಳೂರು ಇವರು ಆಗಮಿಸಲಿದ್ದಾರೆ. ಪ್ರಯುಕ್ತ ಚಳ್ಳಕೆರೆ ಶ್ರೀಕೃಷ್ಣ ವಿದ್ಯಾ ಸಂಸ್ಥೆ, ಗೊಲ್ಲ ನೌಕರರ ಸಂಘ, ಗೊಲ್ಲ ಮಹಿಳಾ ಮಂಡಳಿ, ಹಾಗೂ ಶ್ರೀಕೃಷ್ಣ ಯುವಕ ಸಂಘ, ಶ್ರೀ ನಂದಗೋಕುಲ ಸೇವಾ ಸಮಿತಿ, ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ, ಈ ಎಲ್ಲಾ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸದಸ್ಯರು,ಸಮಾಜದ ಹಿರಿಯ ಮುಖಂಡುರುಗಳು, ಜನಪ್ರತಿನಿಧಿಗಳು, ಹಾಗೂ ಸಮಸ್ತ ಕುಲಭಾಂದವರು ತಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ ಎಂದು ರವಿಕುಮಾರ್ ರವರು ತಿಳಿಸಿದರು..

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
