ಶಿವಮೊಗ್ಗ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ಕಂಡಿಸಿ ರನ್ನನ ನಾಡು ಮುಧೋಳ ಸ್ತಬ್ಧ .
ಮೊನ್ನೆ ರಾತ್ರಿ ಶಿವಮೊಗ್ಗದ ಕಟ್ಟಾ ಹಿಂದೂ ಕಾರ್ಯಕರ್ತ ಹರ್ಶ ಎಂಬ ಯುವಕನನ್ನು ಧುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು.ಈ ಹತ್ಯೆ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು ಕಾರಣ ಕಳೆದ ಹತ್ತು ಹದಿನೈದು ದಿನಗಳಿಂದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ಮತ್ತು ಕೇಸರಿ ವಿವಾಧ ತಾರಕಕ್ಕೆರಿ ಈಗ ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆ ನಡೆಯುತ್ತಿದೆ ಈ ತಿರ್ಪಿಗಾಗಿ ಎರಡು ಸಮುದಾಯಗಳು ಹಾತೋರೆದು ಕಾಯುತ್ತಿವೆ.

ಮತ್ತು ಈ ಸಮಯದಲ್ಲಿ ರಾಜ್ಯದಲ್ಲಿ ಶಾಲಾ ಕಾಲೇಜುಗಳ ಸುತ್ತ ಮುತ್ತ ಸಾರ್ವಜನಿಕ ನಿಷೇಧ ಜಾರಿಯಲ್ಲಿದೆ ಅಂದರೆ (144) ಸೆಕ್ಷನ್ಇದ್ದರು, ಇದರ ಮದ್ಯ ಮೊನ್ನೆ ರಾತ್ರಿ ವೇಳೆ ಉಪಹಾರ ಸೇವಿಸಲು ಹೋಗಿ ದುಷ್ಕರ್ಮಿಗಳಿಂದ ಕೊಲೆಯಾದ ಭಜರಂಗದಳದ ಸಂಘಟನೆಯ ಸಕ್ರಿಯ ಕಾರ್ಯಕರ್ತ ಈ ಸಾವಿನಲ್ಲಿ ರಾಜಕೀಯ ಕೇಸರೆರೆಚಾಟ ಜೋರಾಗಿದೆ ಮತ್ತು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಬೇಕು,

ಮತ್ತು ಹರ್ಶನ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಬೇಕು ಎಂದು ಕೂಗುಗಳು ಕೇಳಿ ಬರುತ್ತಿವೆ ಅದರಂತೆ ರನ್ನನ ನಾಡಿನ ಜನರು ಸಹ ಸ್ವಯಂ ಪ್ರೇರಿತ ರನ್ನ ಮುಧೋಳವನ್ನು ಬಂದ್ ಮಾಡಿ ಗದಗ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು ಕೂಡಲೇ ಸಾವಿಗೆ ಕಾರಣವಾದವರನ್ನು ತಿರ್ವ ವಿಚಾರಣೆಗೋಳೊಸಿ ಅವರನ್ನು ಗಲ್ಲಿಗೆರಿಸಬೇಕು ಎಂದು ಒತ್ತಾಯಿಸಿದರು.

ವರದಿ.ಶಿವಶಂಕರ ಕಡಬಲ್ಲವರ
ಮುಧೋಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
