ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ಮನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬೇಟಿ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ಕನ್ನಡದ ಕಬೀರ್ ಇಬ್ರಾಹಿಂ ಸುತಾರ ಅವರ ನಿವಾಸಕ್ಕೆ ಜಲ ಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಬೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಸಚಿವರು ಇಬ್ರಾಹಿಂ ಸುತಾರರು ಬಹಳ ಆತ್ಮೀಯ ಮತ್ತು ಸರ್ವಧರ್ಮ ಸಮನ್ವಯ ಪ್ರವಚನಕಾರರಾಗಿ ಸಮಾಜದ ಭಾವೈಕ್ಯದ ಹರಿಕಾರರಾರಿಗಿ ಸಮಾಜದ ಸರ್ವತೊಮುಖವಾಗಿ ಸಾಮರಸ್ಯ ಸಂಗಮಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕನ್ನಡದ ಕಬೀರರ ಅಂತ್ಯಕ್ರಿಯೆಕ್ಕೆ ಸಚಿವರಿಗೆ ಕೊರೋನಾ ಆಗಿದ್ದರಿಂದ ಬರಲು ಸಾಧ್ಯವಾಗಲಿಲ್ಲ ಅನ್ನೋದು ತಮ್ಮ ಜೀವನದ ಉದ್ದಕ್ಕೂ ಕಾಡುವ ಸಂಗತಿಯಾಗಿದೆ ಎಂದರು.
ಪುತ್ರ ಹುಮಾಯುನ್ ಮಾತನಾಡಿ ತಂದೆಯವರು ನಮ್ಮನ್ನಗಲಿದ್ದು ಅತೀವ ದುಃಖದ ಸಂಗತಿ ತಂದೆಯವರ ಆಶಯದಂತೆ ಅವರು ನೆನಪಿಗಾಗಿ ತಮ್ಮ ಮನೆಯನ್ನೆ ಭಾವೈಕ್ಯ ಸ್ಮಾರಕವಾಗಿ ರೂಪುಗೊಳಿಸಬೇಕು ಎಂದು ಸಚಿವರ ಮೂಲಕ ಮತ್ತು ಸರ್ಕಾರಕ್ಕೆ ಮನವಿ ಮಾಡಿದರು.

ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
